ಬೆಂಗಳೂರು : ಡೈರಿ ಉತ್ಪನ್ನಗಳ ಪ್ರಮುಖ ಮಾರಾಟ ಸಂಸ್ಥೆಯಾಗಿರುವ ಅಮುಲ್ ಜೊತೆಗಿನ ಪೈಪೋಟಿಯನ್ನು ಕ್ರಿಕೆಟ್ ಅಂಗಳಕ್ಕೂ ವಿಸ್ತರಿಸಲು ನಿರ್ಧರಿಸಿರುವ KMF ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ ತಂಡದ ಪ್ರಾಯೋಜಕತ್ವ ಪಡೆಯುವ ಗುರಿ ಇಟ್ಟುಕೊಂಡಿದೆ.
ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ KMF ಈಗಾಗಲೇ ಟೆಂಡರ್ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಎಡಗೈ ಬ್ಯಾಟ್ಸ್ಮನ್ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳ ಎಡಗೈ ಮೇಲೆ ನಂದಿನಿ ಲೋಗೋ ಹಾಕಲು KMF ಮುಂದಾಗಿದೆ. ಏಪ್ರಿಲ್ನಲ್ಲಿ ಟೆಂಡರ್ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೀತಿ ಸಂಹಿತೆ ಜಾರಿಗೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್ ಅಂತಿಮಗೊಳಿಸಲಿದ್ದೇವೆ ಎಂದು KMF ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಎಂತಹ ದೊಡ್ಡ ನಾಚಿಕೆಗೇಡಿನ ಸಂಗತಿ :
ನಂದಿನಿ ಸ್ಪಾನ್ಸರ್ಶಿಪ್ ಬಗ್ಗೆ ಉದ್ಯಮಿ, ಇನ್ಫೋಸಿಸ್ ಮಾಜಿ ಡೈರೆಕ್ಟರ್ ಮೋಹನ್ ದಾಸ್ ಪೈ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ. ಇದು ಎಂತಹ ದೊಡ್ಡ ನಾಚಿಕೆಗೇಡಿನ ಸಂಗತಿ. ನಂದಿನಿ ಕರ್ನಾಟಕದ ರೈತರಿಗೆ ಸೇರಿದ, ಕನ್ನಡಿಗ ಗ್ರಾಹಕರಿಗೆ ಪಾವತಿಸಬೇಕಾದ ಹಣ ವಿದೇಶಿ ತಂಡಗಳಿಗೆ ಪ್ರಾಯೋಜಿಸಲು ಬಳಸುತ್ತಿದ್ದಾರೆ. ಅದು ಯಾವ ಮೌಲ್ಯವನ್ನ ನೀಡುತ್ತದೆ ಎಂದು ಕಿಡಿಕಾರಿದರು. ತಮ್ಮ ಪೋಸ್ಟ್ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪೋಸ್ಟ್ ಮಾಡಿರುವ ಇವರು, ಬಡ ರೈತರಿಗೆ ಉತ್ತಮ ವೇತನ ನೀಡಿ ಎಂದು ಸಲಹೆ ನೀಡಿದ್ದಾರೆ.
BJP govt in Karnataka tried to kill ‘Nandini’ in order to promote Gujarati ‘Amul’.
Congress made this an election issue and raised awareness, Kannadiga people responded to it and defeated the BJP.
Now, in just 1 year, Congress govt has made ‘Nandini’ so strong that it is going… pic.twitter.com/aDZux2hAjU
— Shantanu (@shaandelhite) April 21, 2024
Why not sponsor the Karnataka Ranji team , Karnataka sports persons, Karnataka artists? Farmers children, scholarship for poor? Kmf is funded by Kannadiga tax papers money, subsidy and investments from budget but chooses to spend on foreign teams whom nobody knows! @siddaramaiah… https://t.co/i8DFYl3Pcl
— Mohandas Pai (@TVMohandasPai) April 21, 2024