Saturday, May 4, 2024

ಬಡವರಿಗೆ ಮೋದಿ ವರ ನೀಡುವ ದೇವರು : ಬೊಮ್ಮಾಯಿ

ಬೆಂಗಳೂರು : ಭ್ರಷ್ಟಾಚಾರಿಗಳಿಗೆ, ಭಯೋತ್ಪಾದಕರಿಗೆ ಮೋದಿ ಶನಿಯಾಗಿಯೇ ಕಾಡೋದು. ಮಹಿಳೆಯರಿಗೆ, ಬಡವರಿಗೆ, ದೇಶಪ್ರೇಮಿಗಳಿಗೆ ಮೋದಿ ವರ ನೀಡುವ ದೇವರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಮಾಜಿ ಸ್ಫೀಕರ್​​ ರಮೇಶ್ ಕುಮಾರ್ ಏನು ಎಂದು ರಾಜ್ಯಕ್ಕೆ ಗೊತ್ತಿದೆ. ನಾವೆಲ್ಲಾ ಒಂದು ಕಾಲದಲ್ಲಿ ಜೊತೆಗೆ ಇದ್ದವರು. ರಮೇಶ್ ಕುಮಾರ್ ಕಾಂಗ್ರೆಸ್​​​ಗೆ ಹೇಳಿದ್ದಾರೆ. ರಮೇಶ್ ಕುಮಾರ್ ಹೇಳಿದಂತೆ ಪ್ರಧಾನಿ ಮೋದಿ ಕಾಂಗ್ರೆಸ್ ಪಾಲಿಗೆ ಶನಿ ಎಂದು ಕುಟುಕಿದ್ದಾರೆ.

ಕರ್ನಾಟಕದ ಜನತೆಗೆ ಚೊಂಬು ನೀಡಿದ್ದೇ ಕಾಂಗ್ರೆಸ್​ ಸರ್ಕಾರ. ಕಿಸಾನ್ ಸಮ್ಮಾನ್ ಯೋಜನೆ ಅಡಿ 4 ಸಾವಿರ ನಿಲ್ಲಿಸಿದ್ದು ಯಾರು..? ರೈತರಿಗೆ ಚೊಂಬು ನೀಡಿದ್ದು ಯಾರು..? Sctp tsp ಹಣ ಬಳಸಿಕೊಂಡು ದಲಿತರಿಗೆ ಚೊಂಬು ನೀಡಿದ್ದು ಸಿದ್ದರಾಮಯ್ಯ ಸರ್ಕಾರ. ಸ್ತ್ರೀ ಶಕ್ತಿ ಯೋಜನೆ ಅಡಿ 5 ಲಕ್ಷ ನೀಡುವ ಯೋಜನೆ ನಿಲ್ಲಿಸಿದ್ದಿರಿ. ಚೊಂಬು ಕೊಟ್ಟಿದ್ದು ನೀವು. ರಸ್ತೆ ಕಾಮಗಾರಿ ನಿಂತಿದೆ, ಅಭಿವೃದ್ಧಿ ನಿಂತಿದೆ. ಚೊಂಬು ನೀಡಿದ್ದು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಜನತೆಗೆ 10 ಕೆಜಿ ಅಕ್ಕಿ ನೀಡಿದ್ದಾರೆ

ದೇವೇಗೌಡರು ಹೇಳಿದ್ದಾರೆ ಇದು ಚೊಂಬಲ್ಲ, ಅಕ್ಷಯ ಪಾತ್ರೆ ಎಂದು. ನಾನು ದೇವೇಗೌಡರಿಗೆ ಅಭಿನಂದನೆ ಸಲ್ಲಿಸುವೆ. 9 ಲಕ್ಷ ಹೆಣ್ಣು ಮಕ್ಕಳು ಉಜ್ವಲ ಯೋಜನೆ ಅಡಿ ಗ್ಯಾಸ್ ನೀಡಿದ್ದಾರೆ. 12 ಲಕ್ಷ ಶೌಚಾಲಯ ನೀಡಿದ್ದಾರೆ. ನಮ್ಮ ಕರ್ನಾಟಕದ ಜನತೆಗೆ 10 ಕೆಜಿ ಅಕ್ಕಿ ನೀಡಿದ್ದಾರೆ. ಇದು ಅಕ್ಷಯ ಪಾತ್ರೆ ಅಲ್ಲದೇ ಇನ್ನೇನು? ಅಕ್ಕಿ ಕೊಟ್ಟವರು ಅಕ್ಷಯ ಪಾತ್ರೆ, ನೀವು ಏನು ಕೊಡ್ತಾ ಇಟ್ರಿ? ಎಂದು ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES