Thursday, May 2, 2024

ಯಡಿಯೂರಪ್ಪ ನೀಚರು, ಆರಗ ಜ್ಞಾನೇಂದ್ರ ಒಬ್ಬ ಹುಚ್ಚ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಬಿ.ಎಸ್. ಯಡಿಯೂರಪ್ಪ ನೀಚರು, ಆರಗ ಜ್ಞಾನೇಂದ್ರ ಒಬ್ಬ ಹುಚ್ಚ ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಬಿಜೆಪಿ ನಾಯಕರುಗಳ ವಿರುದ್ಧ ಹರಿಹಾಯ್ದಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರು ಎಷ್ಟು ನೀಚರಿದ್ದಾರೆ ಎಂದರೆ, ಅದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಕುಟುಕಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಹೇಳುತ್ತಾ ಹೋದರೆ ಈ ಪತ್ರಿಕಾಗೋಷ್ಠಿ ಸಾಕಾಗುವುದಿಲ್ಲ. ನಾನು ಹೇಳಿದರೆ ಅವರ ಅಸಲಿ ಚಿತ್ರಗಳು ಹೊರ ಬರುತ್ತವೆ. ಅವರಿಗೆ ಶೋಭಾ ಅವರ ಮೇಲೆ ಯಾಕಿಷ್ಟು ಮೋಹವೋ ಗೊತ್ತಿಲ್ಲ. ಮಹಿಳೆಯರೆಂದರೆ ಕೇವಲ ಶೋಭಾ ಮತ್ತು ಭಾರತಿ ಶೆಟ್ಟಿಯವರು ಮಾತ್ರವೇ ಎಂದು ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬರುತ್ತಾರೋ ಗೊತ್ತಿಲ್ಲ. ನಿನ್ನೆ ಅವರು ಪತ್ರಕರ್ತರೊಡನೆ ಮಾತು ಆಡಲಿಲ್ಲ. ಮಹಿಳೆಯರ ಶಾಪ ಅವರಿಗೆ ತಟ್ಟುತ್ತದೆ. ಅವರ ಮಕ್ಕಳು ದಾರಿ ತಪ್ಪಿದ್ದಾರೆ. ತಮಗೆ ಬೇಕಾದ ಹೆಣ್ಣು ಮಕ್ಕಳಿಗೆ ಮಾತ್ರ ಅಧಿಕಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಸೋಲನ್ನು ಕಣ್ಣಿನಿಂದ ನೋಡಲು ಆಗಲ್ಲ

ಆರಗ ಜ್ಞಾನೇಂದ್ರ ಅವರಿಗೆ ಜ್ಞಾನವೇ ಇಲ್ಲ. ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ತೀರ್ಥಹಳ್ಳಿಯಲ್ಲಿ ಭಜರಂಗ ದಳದ ಕಾರ್ಯಕರ್ತರು ಸೇರಿದಂತೆ ಅವರಿಗೆ ಬೆಂಬಲ ನೀಡಿದ ಬಿಜೆಪಿಗರು, ಈಗ ನನಗೆ ಬೆಂಬಲ ನೀಡುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ನನ್ನ ಸೋಲನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ ಅಂತ ಹೇಳುತ್ತಾರೆ. ನೋಡುವುದು ಬೇಡ, ನಾನು ಗೆದ್ದೇ ಗೆಲ್ಲುತ್ತೇನೆ. ತೀರ್ಥಹಳ್ಳಿಯಲ್ಲಿ ನನಗೆ ಬೆಂಬಲ ಕೊಡುವವರೇ ಹೆಚ್ಚಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES