Tuesday, April 30, 2024

ಸಿದ್ದರಾಮಯ್ಯ ಈ ರಾಜ್ಯದ ಸಿಎಂ ಆಗಿರಬೇಕು : ಬಸವರಾಜ ರಾಯರೆಡ್ಡಿ

ಕೊಪ್ಪಳ : ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿರಬೇಕು. ನನ್ನ ಹಣಕಾಸು ಮಂತ್ರಿ ಮಾಡಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮ್ಯಾನೇಜರ್. ಈ ದಲ್ಲಾಳಿ ಅಂಗಡಿಯಲ್ಲಿ ಇರುತ್ತಾರಲ್ಲ ಹಾಗೆ ಎಂದು ತಿಳಿಸಿದ್ದಾರೆ.

ನಾನು ಹಣಕಾಸು ವಿಷಯವನ್ನು ಪಟ್ಟಿ ಮಾಡಿದ್ರೆ, ಸಿದ್ದರಾಮಯ್ಯ ಅವರು ಸಹಿ ಮಾಡುಡ್ತಾರೆ. ಮುಂದೆ ನನ್ನ ಸಿದ್ದರಾಮಯ್ಯ ಮಂತ್ರಿ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಮಾಡಿದ್ರೆ ಹಣಕಾಸು ಮಂತ್ರ ಮಾಡ್ಲಿ ಅಂತ ನಾನು ಸುಮ್ಮನೆ ಕೆಲವರ ಬಳಿ ಹೇಳಿರುವೆ. ಇದನ್ನೇ ಕೆಲವರು ಅಪಪ್ರಚಾರ ಮಾಡುತ್ತಾರೆ. ಏನೇ ಇರಲಿ ನಾವು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದ್ದಾರೆ.

ಶಾಸಕ ಜನಾರ್ಧನರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗಂಗಾವತಿ ಶಾಸಕ ರೆಡ್ಡಿ ಹೇಳ್ತಾರೆ. ರಾಯರೆಡ್ಡಿ ಅವರು ರಾಜಶೇಖರ್ ಹಿಟ್ನಾಳ್ ಅವರನ್ನು ಸೋಲಿಸುತ್ತಾರೆ. ಯಾಕಂದ್ರೆ ರಾಯರೆಡ್ಡಿ ಮಂತ್ರಿ ಆಗಬೇಕಾಗಿದೆ. ರಾಜಶೇಖರ್ ಹಿಟ್ನಾಳ್ ಸೋತ್ರೆ ಶಿವರಾಜ್ ತಂಗಡಗಿ ಮಂತ್ರಿ ಸ್ಥಾನ ಹೋಗುತ್ತೆ ಎಂದು ರೆಡ್ಡಿ ಹೇಳಿದ್ದಾರೆ. ನಾನು ಅಂತಹ ಚಿಲ್ಲರೆ ಕೆಲಸ ಮಾಡುವುದಿಲ್ಲ. ನಾನು ಹೇಳುವುದಾದರೆ ನೇರವಾಗಿ ಹೇಳ್ತಿನಿ, ಕಾಂಗ್ರೆಸ್ ಪಕ್ಷ ಬಿಟ್ಟು ಹೋಗ್ತಿನಿ. ಆದರೆ, ಒಬ್ಬರನ್ನು ಸೋಲಿಸುವಷ್ಟು ಕೆಳಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಾಳೆಯೇ ಆರ್ಥಿಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವೆ

ನಾನು ಮಂತ್ರಿ ಸ್ಥಾನನೇ ಬೇಡ ಎಂದಿರುವೆ, ನನಗೆ ಮಂತ್ರಿ ಸ್ಥಾನ ಬೇಡ. ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತ. 1985 ರಿಂದ ನಾವು ರಾಜಕೀಯ ಸ್ನೇಹಿತರು. ನಾವು ರಾಜಕೀಯಕ್ಕೆ ಬಂದಿದ್ದು ದುಡ್ಡು ಮಾಡುವುದಕ್ಕೆ ಅಲ್ಲ. ಜನರ ಸೇವೆಗಾಗಿ ಬಂದಿದ್ದೇವೆ. ಬೇಕಾದ್ರೆ ನಾನು ನಾಳೆಯೇ ಆರ್ಥಿಕ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವೆ. ಸಿದ್ದರಾಮಯ್ಯ ಅವರು ಹೇಳಿದ್ದಕ್ಕೆ ಈ ಸ್ಥಾನ ಒಪ್ಪಿಕೊಂಡಿರುವೆ. ಇದರಿಂದ ನನಗೆ ಒಂದು ರೂಪಾಯಿ ಲಾಭ ಇಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES