Tuesday, April 30, 2024

ನಮ್ಮ ಅಜ್ಜ, ಮುತ್ತಜ್ಜನಿಗೆ ಇಲ್ಲದ ಭಾಗ್ಯ ನಮಗೆ ಸಿಕ್ಕಿದೆ : ಯಡಿಯೂರಪ್ಪ

ಕೊಪ್ಪಳ : ಇಂದು ಶ್ರೀರಾಮ ನವಮಿ. ಬಹಳ ವರ್ಷಗಳ ಹೋರಾಟದ ಫಲ, ಇಂದು ಅಯೋಧ್ಯದಲ್ಲಿ ಶ್ರೀರಾಮನ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ನಮ್ಮ ಅಜ್ಜ, ಮುತ್ತಜ್ಜನಿಗೆ ಇಲ್ಲದ ಭಾಗ್ಯ ನಮಗೆ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಇಂದು ಕಾಂಗ್ರೆಸ್ ನಾಯಕರಿಗೆ ನಾನು ಕೇಳುತ್ತೇನೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು? ಎಂದು ಪ್ರಶ್ನೆ ಮಾಡಿದರು.

ನಿಮಗೆ ನಾಯಕ ಯಾರು ಇಲ್ಲ. ಇಲ್ಲಿ ನಮ್ಮ ಅಭ್ಯರ್ಥಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಈ 10 ವರ್ಷದಲ್ಲಿ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ದೇಶ ವಿದೇಶಗಳನ್ನು ಸುತ್ತಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕೊಪ್ಪಳವನ್ನು ಮಾದರಿ ಜಿಲ್ಲೆ ಮಾಡುತ್ತೇವೆ

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದೆ. ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ. ಎಲ್ಲೆಡೆ ಭವ್ಯವಾದ ಸ್ವಾಗತ ನಮಗೆ ಸಿಗುತ್ತಿದೆ. ಇಲ್ಲಿ ನಮ್ಮ ಅಭ್ಯರ್ಥಿ ಬಸಬರಾಜ್​ಗಾಗಿ ಇಷ್ಟೊಂದು ಜನ ಸೇರಿದ್ದೀರಿ. ಇದು ನಿಜಕ್ಕೂ ಉತ್ತಮ ವಾತಾವರಣ ಇದೆ. ಅವರನ್ನು ಗೆಲ್ಲಿಸಿ, ಕೊಪ್ಪಳವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES