ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ನಾಡಿನ ಒಳಿತಿಗಾಗಿ ದೇವರ ಮೊರೆ ಹೋಗಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಚೌಡೇಶ್ವರಿ ದೇವಾಲಯದಲ್ಲಿ ಕೊಂಡ ಹಾಯ್ದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಲಹಂಕದ ಚೌಡೇಶ್ವರಿ ದೇವಾಲಯದಲ್ಲಿ ಕೊಂಡ ಹಾಯ್ದು, ನಾಡಿನಲ್ಲಿ ಮಳೆ ಬೆಳೆಯಾಗಿ ಸಮೃದ್ಧಿ ನೆಲಸಲಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ತಾಯಿ ಚೌಡೇಶ್ವರಿ ಸಕಲ ಸಮೃದ್ಧಿ ಕಲ್ಪಿಸಲಿ ಎಂದು ಪ್ರಾರ್ಥಿಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾರ್ಯಕರ್ತರೊಂದಿಗೆ ಬೇವು ಬೆಲ್ಲ ಸವಿದು, ಕಷ್ಟ-ಸುಖ ಸಮಾನಾಗಿರಲಿ ಎಂದು ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜನತೆಯ ಶ್ರೇಯಸ್ಸೇ ನನ್ನ ಏಕಮೇವ ಗುರಿ. ನನ್ನ ಜನ, ನನ್ನ ಹೊಣೆ ಎಂದು ಜನತೆಗೆ ಭರವಸೆ ನೀಡಿದ್ದಾರೆ.
ರಂಜಾನ್ಗೆ ಶುಭ ಕೋರಿದ ರರಾ
ಇನ್ನು, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಾಡಿನ ಮುಸ್ಲಿಂ ಭಾಂದವರಿಗೆ ರಕ್ಷಾ ರಾಮಯ್ಯ ಶುಭ ಕೋರಿದ್ಧಾರೆ. ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು. ನಿಮ್ಮೆಲ್ಲಾ ಕಷ್ಟಗಳನ್ನು ಕರುಣಾಳು ಅಲ್ಲಾಹ್ ದೂರ ಮಾಡಲಿ, ನಿಮ್ಮೆಲ್ಲಾ ಪ್ರಾರ್ಥನೆಯನ್ನು ದೇವರು ಅಲಿಸಲಿ. ಸದಾ ಕಾಲ ನಿಮ್ಮ ಮನ, ಮನೆಗಳಲ್ಲಿ ಇನ್ನಷ್ಟು ಖುಷಿಯನ್ನು ತುಂಬುವ, ಸಮಾಧಾನ ನೆಲೆಗೊಳ್ಳುವ ದಾರಿಯನ್ನು ದೇವರು ನಿಮಗೆ ಕರುಣಿಸಲಿ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಲಹಂಕದ ಚೌಡೇಶ್ವರಿ ದೇವಾಲಯದಲ್ಲಿ ಕೊಂಡ ಹಾಯ್ದು, ನಾಡಿನಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿ ನೆಲಸಲಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ತಾಯಿ ಚೌಡೇಶ್ವರಿ ಸಕಲ ಸಮೃದ್ಧಿ ಕಲ್ಪಿಸಲಿ ಎಂದು ಯುಗಾದಿಯ ದಿನದಂದು ಪ್ರಾರ್ಥಿಸಿದೆ.
ಚಿಕ್ಕಬಳ್ಳಾಪುರ ಜನತೆಯ ಶ್ರೇಯಸ್ಸೇ ನನ್ನ ಏಕಮೇವ ಗುರಿ!
ನನ್ನ ಜನ,… pic.twitter.com/SpypY0lwND— RR 🇮🇳 (@RakshaRamaiah) April 10, 2024