Monday, May 6, 2024

ಹೆಣ್ಣು ಕೊಡಬೇಕಾದ್ರೆ, ಸ್ವಂತ ಬಲ ಇದ್ದೋನಿಗೆ ಹೆಣ್ಣು ಕೊಡ್ತೇವೆ : ಸಾಗರ್ ಖಂಡ್ರೆ ಕುರಿತು ಖೂಬಾ ವ್ಯಂಗ್ಯ

ಬೀದರ್ : ಕೇಂದ್ರ ಸಚಿವ ಭಗವಂತ ಖೂಬಾ ಅವರು ಪ್ರಚಾರದ ನಡುವೆ ಕಾಂಗ್ರೆಸ್​ ಅಭ್ಯರ್ಥಿ ಸಾಗರ್ ಖಂಡ್ರೆ ಕುರಿತು ವ್ಯಂಗ್ಯವಾಡಿದ್ದಾರೆ. ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯೋನು ಸಾಗರ್ ಖಂಡ್ರೆ ಎಂದು ಜರಿದಿದ್ದಾರೆ.

ಬೀದರ್​ನ ಸಿದ್ಧಾರೂಡ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನೆ ಹೆಣ್ಣು ಕೊಡಬೇಕಾದ್ರೆ, ಸ್ವಂತ ಬಲ ಇದ್ದೋನಿಗೆ ಹೆಣ್ಣು ಕೊಡುತ್ತೇವೆ. ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯೋನಿಗೆ ಯಾರಾದ್ರೂ ಹೆಣ್ಣು ಕೊಡ್ತಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಹುಡಗುನ ತಂದೆ ಎಷ್ಟೇ ಆಗರ್ಭ ಶ್ರೀಮಂತನಾಗಿದ್ರೂ, ಹುಡುಗನಿಗೆ ಸ್ವಂತಬಲ ಇಲ್ಲದೇ ಇದ್ರೆ ಹೆಣ್ಣು ಕೊಡೊಲ್ಲ. ಅದೇ ರೀತಿ ಬೀದರ್ ಲೋಕಸಭೆಯಲ್ಲೂ ಸಾಗರ್ ಖಂಡ್ರೆ ಪರಿಸ್ಥಿತಿ ಇದೆ. ತಂದೆ ಹೆಸರ ಮೇಲೆ ಲೊಟಂಗಿ (ಲಗಾ) ಹೊಡೆಯುತ್ತಾರೆ. ಅಂತವರಿಗೆ ಯಾರೂ ಮತ ಹಾಕೋಲ್ಲ ಎಂದು ಟೀಕಿಸಿದ್ದಾರೆ.

ಬೀದರ್​ಗೆ ಖಂಡ್ರೆ ಮನೆತನದ ಕೊಡುಗೆ ಏನು?

ನಾನು ಪಕ್ಷದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಸಂಸದನಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ಬಿಜೆಪಿ ಅಭ್ಯರ್ಥಿ ಆಗಿದ್ದೇನೆ. ಆದ್ರೆ, ಸಾಗರ್ ಖಂಡ್ರೆ ತಂದೆ ಹೆಸರ ಮೇಲೆ ಲೊಟಂಗಿ ಹೊಡೆಯುತ್ತಿದ್ದಾರೆ. ಈಶ್ವರ ಖಂಡ್ರೆ ಮಾತೇತ್ತಿದ್ರೆ ಖೂಬಾ ಸಾಧನೆ ಶೂನ್ಯ ಅಂತಾರೆ. ನನ್ನ ಸಾಧನೆಯನ್ನ ನಾನು ಜನರ ಮುಂದೆ ಇಡ್ತೇನೆ. ಆದ್ರೆ, ಬೀದರ್ ಜಿಲ್ಲೆಗೆ ಖಂಡ್ರೆ ಮನೆತನದ ಕೊಡುಗೆ ಏನು..? ಕಳೆದ 65 ವರ್ಷಗಳಿಂದ ಭಾಲ್ಕಿ ಹಾಗೂ ಬೀದರ್‌ನಲ್ಲಿ ಖಂಡ್ರೆ ಕುಟುಂಬದವರು ರಾಜಕೀಯ ಮಾಡ್ತಾ ಇದ್ದಾರೆ. ಏನು ಸಾಧನೆ ಮಾಡಿದ್ದಾರೆ? ಏನು ಕೊಡುಗೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀವು ಕುರುಡು, ಕಿವುಡು, ಮೂಗ ಇರಬೇಕು

ಬೀದರ್‌ಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಖಂಡ್ರೆ ಕುಟುಂಬವೇ ಕಾರಣ. ಜನರ ಏಳಿಗೆಯನ್ನ ಖಂಡ್ರೆ ಕುಟುಂಬ ಯಾವತ್ತೂ ಬಯಸಿಲ್ಲ. ನನ್ನ ಸಾಧನಯನ್ನ‌ ಜನರು ಹಾಗೂ ನಾಯಕರು ಮಾತಾಡ್ತಿದ್ದಾರೆ. ನೀವು ಕುರುಡು, ಕಿವುಡು, ಮೂಗ ಇರಬೇಕು. ಅದಕ್ಕೆ ನಮ್ಮ ಸಾಧನೆ ಕಂಡಿಲ್ಲ ಎಂದು ಈಶ್ವರ್ ಕುಟಂಬದ ವಿರುದ್ದ ಭಗವಂತ ಖೂಬಾ ಹರಿಹಾಯ್ದಿದ್ದಾರೆ.

RELATED ARTICLES

Related Articles

TRENDING ARTICLES