ಕೊಪ್ಪಳ : ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿ ಅಪ್ಪನ ಆಸ್ತಿ ಅಲ್ಲ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಮಾಜಿ ಎಂಎಲ್ಸಿ ಹೆಚ್.ಆರ್. ಶ್ರೀನಾಥ್ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ನಲ್ಲಿ ಕೈ ನಾಯಕರ ಬಹಿರಂಗ ಕಿತ್ತಾಟ ಮುಂದುವರಿದಿದೆ. ಇಕ್ಬಾಲ್ ಅನ್ಸಾರಿ ಹೊರತುಪಡಿಸಿ ಎಲ್ಲಾ ಕೈ ನಾಯಕರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಸಭೆಗೆ ಹೋಗಬೇಡಿ ಎಂದಿದ್ದ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ನಾಯಕರೇ ತಿರುಗೇಟು ನೀಡಿದ್ದಾರೆ.
ಎಂದು ಮಾಜಿ ಎಂಎಲ್ಸಿ ಹೆಚ್.ಆರ್. ಶ್ರೀನಾಥ್ ಮಾತನಾಡಿ, ಇಕ್ಬಾಲ್ ಅನ್ಸಾರಿ ಎನ್ನುವ ಆಕಾಶವಾಣಿಯನ್ನು ಮೊದಲು ಸೈಡಿಗೆ ಇಡಬೇಕು. ಇಕ್ಬಾಲ್ ಅನ್ಸಾರಿಗೆ ಕಾಪೌಂಡ್ ಇದೀಗ ಖಾಲಿಯಾಗ್ತಿದೆ. ಅವರನ್ನು ನಂಬಿದವರಿಗೆ ಅನ್ಸಾರಿ ಮೋಸ ಮಾಡಿದ್ದಾರೆ. ಇಕ್ಬಾಲ್ ಅನ್ಸಾರಿಗೆ ಶೋಕಿ ಜಾಸ್ತಿ ಎಂದು ಹರಿಹಾಯ್ದಿದ್ದಾರೆ.
ಆಕಾಶವಾಣಿಯನ್ನು ಯಾರು ತಲೆಕೆಡಸಿಕೊಳ್ಳಬೇಡಿ
ಬರೀ ಕಾಂಗ್ರೆಸ್ ನವರನ್ನು ಬೈಯ್ಯೋದು, ಬೈಯ್ಯಿಸಿಕೊಳ್ಳೋದು ಆಗಿದೆ. ಇದೀಗ ಇಕ್ಬಾಲ್ ಅನ್ಸಾರಿ ಶೋಕಿ ಮಾಡೋದು ಬಿಟ್ಟು ಪ್ರಚಾರಕ್ಕೆ ಬರಲಿ. ನಾವು ನಮ್ಮ ಪಾಡಿಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತೀವಿ. ಎಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ. ಇಕ್ಬಾಲ್ ಅನ್ಸಾರಿಯ ಆಕಾಶವಾಣಿಯನ್ನು ಯಾರು ತಲೆಕೆಡಸಿಕೊಳ್ಳಬೇಡಿ ಎಂದು ಹೆಚ್.ಆರ್. ಶ್ರೀನಾಥ್ ಹೇಳಿದ್ದಾರೆ.