Thursday, May 9, 2024

ಯುಗಾದಿಯ ಪ್ರಯುಕ್ತ ಶ್ರೀ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಂಕಲ್ಪ

ಜೀವನದಲ್ಲಿ ಸಾಧನೆಯನ್ನು ಮಾಡಬೇಕೆಂದು ಹಂಬಲಿಸುತ್ತಿರುವರಿಗೆ ಈ ಯುಗಾದಿಯ ಪ್ರಯುಕ್ತ ಶ್ರೀ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಂಕಲ್ಪವನ್ನು ಹಮ್ಮಿಕೊಳ್ಳಲಾಗಿದ್ದು,ಭಕ್ತರು ಮಠಕ್ಕೆ ಆಗಮಿಸುವಂತೆ ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

ಆತ್ಮೀಯ ಶಿಷ್ಯವೃಂದ ಮತ್ತು ಭಕ್ತವೃಂದಕ್ಕೆ ಶ್ರೀಕ್ರೋಧಿ ನಾಮ ಸಂವತ್ಸರದ ಶುಭಾಷಯಗಳನ್ನು ಶುಭಾಷಂ ತಿಳಿಸುತ್ತಾ  ಹಲವಾರು ಯುಗಾದಿಯನ್ನು ನಾವೆಲ್ಲರೂ ಆಚರಿಸಿದ್ದೇವೆ. ಇಂತಹ ಎಷ್ಟೋ ಯುಗಾದಿಯಲ್ಲಿ ನಮ್ಮ ಜೀವನದ ಅಮೂಲ್ಯವಾದ ದಿನಗಳನ್ನು ಕಳೆದಿದ್ದೇವೆ.

ಶಿಷ್ಯರೇ ಮತ್ತು ಭಕ್ತರೇ ನಿಮಗೆ ನನ್ನದೊಂದು ಶ್ರೀ ಸದ್ಧ ಪ್ರತಿಯೊಂದು ಕ್ಷಣವನ್ನು ಮತ್ತು ಸಮಯವನ್ನು ಭಗವಂತ ನಮಗೆ ಏನಾದರೂ ಸಾಧಿಸುವುದಕ್ಕೆ ನೀಡಿರುತ್ತಾನೆ. ಇಂತಹ ಅಮೂಲ್ಯವಾದ ಸಮಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡು ಜೀವನದ ಸಾರ್ಥಕತೆಯನ್ನು ಮಾಡಿಕೊಂಡಿದ್ದೇವೆ? ಯೋಚಿಸಿ.

ಆದ್ದರಿಂದ ಜೀವನದಲ್ಲಿ ಸಾಧನೆಯನ್ನು ಮಾಡಬೇಕೆಂದು ಹಂಬಲಿಸುತ್ತಿರುವ ಸಕಲ ಶಿಷ್ಯಂದಿರಿಗೂ ಈ ಯುಗಾದಿಯ ಪ್ರಯುಕ್ತ (ದಿನಾಂಕ 09-04-2024) ಶ್ರೀ – ಮಠದಲ್ಲಿ ನಡೆಯುತ್ತಿರುವ “ಶ್ರೀ ಸಿದ್ಧಲಿಂಗೇಶ್ವರರ ಸಂಕಲ್ಲ” ಕ್ಕೆ ಎಲ್ಲರಿಗೂ ಆದರದ ಸ್ವಾಗತ. ತಾವುಗಳಲ್ಲದೇ ತಮ್ಮ ಬಂಧು-ಮಿತ್ರರನ್ನು, ಇತರರನ್ನು ಕರೆ ತನ್ನಿ ಎಂದು ಮನವಿ ಮಾಡಿದ್ದಾರೆ.

ನೂರು ವರ್ಷಗಳ ಆಯುಷ್ಯ, ಸಧೃಡವಾದ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ಸಕಲ ಅರಿಷ್ಟಗಳ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತೇನೆ’ ಎಂಬ ಶ್ಲೋಕವನ್ನು ಗುರುಗಳ ಮುಖಾಂತರ ಹೇಳಿಸಿಕೊಂಡು ಗುರುಗಳ ಕೈಯಿಂದ ಬೇವು-ಬೆಲ್ಲವನ್ನು ಪಡೆದು ಸಾಧನೆಯನ್ನು ಮಾಡುವ ಸಂಕಲ್ಪವನ್ನು ಗುರುಗಳ ಸಾನ್ನಿಧ್ಯದಲ್ಲಿ ಮಾಡೋಣ

ಯುಗಾದಿಯನ್ನು ನಮ್ಮ ಜೀವನದ ನವ ಜೀವನದ ಸಂಕಲ್ಪದ ದಿನವಾಗಿ ಆಚರಿಸೋಣ ಎಂದು ತಿಳಿಸಿದ್ದಾರೆ.

 

RELATED ARTICLES

Related Articles

TRENDING ARTICLES