Thursday, May 9, 2024

ದೇವೇಗೌಡ್ರು ಮಣ್ಣಾಗುವವರೆಗೂ ರಾಜಕೀಯ ನಿವೃತ್ತಿ ಇಲ್ಲ : ಕುಮಾರಸ್ವಾಮಿ

ಮೈಸೂರು : ದೇವೇಗೌಡರು ಭೂಮಿಗೆ ಹೋಗುವವರೆಗೆ ರಾಜಕೀಯ ನಿವೃತ್ತಿ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಮೈಸೂರಿನ ಕೆ.ಆರ್. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಯೋ ವಯಸ್ಸಲ್ಲಿ ದೇವೇಗೌಡ್ರಿಗೆ ರಾಜಕೀಯ ಬೇಕಾ? ಎಂದಿದ್ದ ಸಚಿವ ಕೆ.ಎನ್. ರಾಜಣ್ಣರಿಗೆ ತಿರುಗೇಟು ನೀಡಿದರು.

ಅಳಿಯ, ಮಗ, ಮೊಮ್ಮಗ ಅಂತ ಹೇಳ್ತಿದ್ದಾರೆ. ಅವರ ಕುಟುಂಬವರು ಈಗ ಏನಾಗಿದೆ..? ಏನು ಕೆಲಸ ಮಾಡಿದ್ದಾನೆ ಅಂತ ಮಗನನ್ನ ಎಂಎಲ್ ಸಿ ಮಾಡಿದ್ದಾರೆ. ರಾಜಣ್ಣ ವಿಧಾನಸೌಧದ ಮೆಟ್ಟಿಲು ಹತ್ತಿದ್ದೇ ದೇವೇಗೌಡರಿಂದ. ದೇವೇಗೌಡರ ಪ್ರಚಾರದಿಂದಲೇ ರಾಜಣ್ಣ ಗೆದ್ದಿದ್ದು ಎಂದು ಕುಟುಕಿದರು.

ಇವರ ಆಟ ಹೆಚ್ಚು ದಿನ ನಡೆಯಲ್ಲ

ರಾಜಣ್ಣರಿಂದ ಸಲಹೆ ಪಡೆಯುವ ದಯಾನೀಯ ಪರಿಸ್ಥಿತಿ ನಮಗೆ ಬಂದಿಲ್ಲಿ. ಅವರು ಬಂದಿರುವ ಸಂಸ್ಕೃತಿ ಅಂತಹದ್ದು. ಅವರು ಯಾರನ್ನ ಒಲೈಸಿಕೊಳ್ಳುಲು ಹೇಳಿಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಆದ್ರೆ, ಇದನ್ನೆಲ್ಲ ಗಮನಿಸಿದ್ರೆ ಒಲೈಕೆ ಮಾಡಬಹುದು. ಇವರ ಆಟ ಹೆಚ್ಚು ದಿನ ನಡೆಯಲ್ಲ. ಅವರುಗಳೇ ಸರ್ಕಾರ ತೆಗೆಯುತ್ತಾರೆ ಎಂದು ಚಾಟಿ ಬೀಸಿದರು.

ಸರ್ಕಾರದ ಆಯಸ್ಸು ಬಹಳ ದಿನ ಇಲ್ಲ

ಇವರುಗಳು ಜಾತಿ ಹೆಸರನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರು ನಮಗೆ ಜಾತ್ಯಾತೀತ ತೆಗೆಯಿರಿ ಅಂತಾರೆ. ಅವರ ಜಾತಿ ಕಾರ್ಡ್ ವರ್ಕ್​ ಆಗಲ್ಲ. ಇತ್ತೀಚಿಗೆ ಒಕ್ಕಲಿಗರ ಮೇಲೆ ಇವರಿಗೆ ಪ್ರೀತಿ ಬಂದಿದೆ. 47 ವರ್ಷದಿಂದ ಒಕ್ಕಲಿಗರಿಗೆ ಕೊಡಬೇಡಿ ಅಂತ ಹೇಳಿದ್ವಾ..? ಹಲವು ಮಂತ್ರಿಗಳ ಹೇಳಿಕೆಗಳನ್ನ ನೋಡಿದ್ರೆ ಈ ಸರ್ಕಾರ ಬಹಳ ದಿನ ಇರಲ್ಲ. ಸರ್ಕಾರದ ಆಯಸ್ಸು ಬಹಳ ದಿನ ಇಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES