Thursday, May 9, 2024

ಬಿಜೆಪಿ ಋಣದಲ್ಲಿ ST ಸೋಮಶೇಖರ್​ ಇದ್ದಾರೆ: ಯತ್ನಾಳ್​

ವಿಜಯಪುರ: ST ಸೋಮಶೇಖರ್  ಅವರೇ ದೇಶ ಧರ್ಮ ಇರಬೇಕು ಅಂದ್ರೆ ಬಿಜೆಪಿ ಪರವಾಗಿ ಪ್ರಚಾರದ ಕೆಲಸ ಮಾಡಿ ನೀವು ಬಿಜೆಪಿ ಋಣದಲ್ಲಿ ಇದ್ದೀರಾ ಎಂದು ಶಾಸಕ ಯತ್ನಾಳ್​ ಮನವಿ ಮಾಡಿದ್ದಾರೆ. 

ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಭಾರತೀಯ ಜನತಾ ಪಾರ್ಟಿಯಿಂದ ಮಂತ್ರಿಯಾಗಿದ್ದೀರಿ.ನಿಮ್ಮ ಜೀವನದಲ್ಲಿ ಎಂದು ಮಂತ್ರಿಯಾಗುತ್ತಿರಲ್ಲ.ನೀವು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಆಯಿತು ಅದಕ್ಕೆ ನಿಮ್ಮ ಉಪಕಾರ ಕೂಡಾ ಇದೆ. ಅದನ್ನು ನಾವೇನು ಅಲ್ಲಗಳೆಯಲ್ಲ.ನಿಮಗೆ ಬಿಜೆಪಿಯಿಂದ ಸಹಿತ ಉಪಕಾರ ಆಗಿದೆ ಅದನ್ನು ಮರೆಯಬೇಡಿ ಎಂದರು.

ಬಿಜೆಪಿ ಪಕ್ಷ ಸಹಕಾರ ಮಂತ್ರೀ ಮಾಡಿದೆ. ಮೈಸೂರು ಉಸ್ತುವಾರಿ ಸಚಿವ ಮಾಡಲಾಯಿತು.ಇನ್ನೂ ಉತ್ತರ ಕನ್ನಡದಲ್ಲಿ ಶಿವರಾಮ ಹೆಬ್ಬಾರಗೆ ಹೇಳಿ ಬಂದಿನಿ.ನಿಮಗೇನಾದರೂ ದೇಶ ಧರ್ಮ ಇರಬೇಕು ಎಂದರೆ ಬಿಜೆಪಿ ಪರವಾಗಿ ಚುನಾವಣೆ ಮಾಡಿ ಎಂದರು.

ನೀವು ಬಿಜೆಪಿ ಋಣದಲ್ಲಿ ಇದ್ದೀರಾ ನಿಮಗೆ ಒಲ್ಲೆ ಆಗಿದ್ದ ರಾಜೀನಾಮೆ ಕೊಟ್ಟು ಬೇಕಾದ್ದಂಗೆ ಮಾಡಿ.
ಬಿಜೆಪಿ ಯಲ್ಲಿ ಇದ್ದು ಮಾಡುವದಾದರೆ ನಿಮಗೆ ಜನ ಕೂಡಾ ಒಪ್ಪಲ್ಲ. ಅದು ನೈತಿಕತೆ ಕೂಡಾ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

RELATED ARTICLES

Related Articles

TRENDING ARTICLES