ಬೆಂಗಳೂರು: ನನ್ನ ಉದ್ದೇಶ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗ್ಬೇಕು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ದೇಶದಲ್ಲೇ ನಡೆಯುತ್ತಿರುವ ಎಲೆಕ್ಷನ್ ಇದು. ನನ್ನ ಉದ್ದೇಶ ಮತ್ತೆ ಮೋದಿ ಆಗಬೇಕು.ಎನ್ಡಿಎ ಹೆಚ್ಚಿನ ಸೀಟು ಗೆಲ್ಬೇಕು.ಏಕಾಏಕಿ ಎಲ್ಲರೂ ಕನ್ವೀಸ್ ಆಗಲ್ಲ ಹಂತ ಹಂತವಾಗಿ ಎಲ್ಲರನ್ನೂ ಕರೆದುಕೊಂಡು ಬಿಜೆಪಿಗೆ ಬರ್ತೀನಿ ಅಭಿಷೇಕ್ ಬಿಜೆಪಿ ಸೇರ್ಪಡೆ ಆಗಲ್ಲ ನಾನು ಮಾತ್ರ ಆಗ್ತಾ ಇರೋದು ಎಂದರು.
ಮಂಡ್ಯ ಸಪೋರ್ಟರ್ಸ್ ಇದ್ದಾರೆ
ಮಂಡ್ಯ ಜಿಲ್ಲೆಯ ನನ್ನ ಬೆಂಬಲಿಗರೇ ನನ್ನ ಹೈಕಮಾಂಡ್ ಎಲ್ಲರೂ ಬಂದಿದ್ದಾರೆ.ಅಂಬರೀಷ್ ಜೊತೆ ಇದ್ದವರು ನನ್ನ ಜೊತೆ ಇದ್ದಾರೆ ಮುಂದೇನು ಇರ್ತಾರೆ.ಈ ಹಿಂದೆ ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸಿದ್ದೇನೆ.ಅಸೆಂಬ್ಲಿ ಎಲೆಕ್ಷನ್ನಲ್ಲೂ ಅವರ ಸಪೋರ್ಟಿಗೆ ನಿಂತಿದೆ.ಎಲ್ಲೂ ಕೂಡ ನನ್ನ ಡಬಲ್ ಸ್ಟ್ಯಾಂಡ್ ತಗೊಂಡಿಲ್ಲ.
ಸ್ಥಾನ ಮಾನ ನಿರಿಕ್ಷೇ ಇಟ್ಕೊಂಡು ನಾನು ಹೆಜ್ಜೆ ಹಾಕಲ್ಲ
ಬಿಜೆಪಿಯ ಸಂದೇಶ, ಕೆಲಸ, ಅಭಿವೃದ್ಧಿಯಿಂದ ನಾನು ಸೇರುತ್ತಿರುವುದು.ನಾನು ಆ ಪಕ್ಷ ಸೇರುದ್ರೆ ಮತ್ತಷ್ಟು ಕೆಲಸ ಮಾಡಬಹುದು.ಸ್ಥಾನ ಮಾನ ನಿರಿಕ್ಷೇ ಇಟ್ಕೊಂಡು ನಾನು ಹೆಜ್ಜೆ ಹಾಕಲ್ಲ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಆಗಿರುತ್ತೆ ಅದರಲ್ಲಿ ಎರಡು ಮಾತಿಲ್ಲ.ಅಂಬರೀಶ್ ಇದಿದ್ದರೆ ರಾಜಕೀಯಕ್ಕೆ ಬರೋ ಪ್ರಸಂಗನೇ ಇರ್ತಾ ಇರಲಿಲ್ಲ ಅವರು ನನ್ನ ನಿರ್ಧಾರ ಒಪ್ಕೋತ್ತಾರೆ ಎಂದರು.