Thursday, May 9, 2024

ಮಂಡ್ಯದ ಗಂಡಿನ ಮಗ ನಾನು, ಇದನ್ನು ಕಿತ್ತುಕೊಳ್ಳೋಕೆ ಆಗಲ್ಲ : ಅಭಿಷೇಕ್ ಅಂಬರೀಶ್

ಮಂಡ್ಯ : ಮಂಡ್ಯ ಗಂಡಿನ ಮಗ ನಾನು, ಇದನ್ನು ಕಿತ್ತುಕೊಳ್ಳೋಕೆ ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹೇಳಿದರು.

ಮಂಡ್ಯದ ಕಾಳಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಂಬರೀಶ್ ಅಣ್ಣ ಅಂದ್ರೆ ಮಂಡ್ಯ, ಮಂಡ್ಯ ಅಂದ್ರೆ ಅಂಬರೀಶ್ ಎಂದು ತಿಳಿಸಿದರು.

ನನಗೆ ಹಲವು ಯೋಚನೆ ಇತ್ತು, ಏನು ಮಾತನಾಡೋದು ಅಂತ. 5 ವರ್ಷದ ಹಿಂದೆ ಇದೇ ಕಾಳಿಕಾಂಬ ದೇವಸ್ಥಾನದಿಂದ ಸ್ವಾಭಿಮಾನದ ಹೋರಾಟ ಪ್ರಾರಂಭ ಆಯಿತು. ಅಂಬರೀಶ್ ಅಣ್ಣನ ಅಭಿಮಾನದಿಂದ ಇದಲ್ಲೆವೂ ಸಾಧ್ಯತೆವಾಗಿದೆ. ಮಂಡ್ಯದಲ್ಲಿ ಅಂಬರೀಶ್ ಅಣ್ಣನಿಗೆ ಪ್ರೀತಿ ಜಾಸ್ತಿ ಎಂದರು.

ಅಂಬರೀಶಣ್ಣನ ಮಗನಾಗಿ ಹೇಳೋದು ಏನಂದ್ರೆ

ಅಂಬರೀಶ್ ಅಣ್ಣನ ಮಗನಾಗಿ ಹೇಳೋದು ಏನಂದ್ರೆ, ಚುನಾವಣೆ ಬರುತ್ತವೆ ಹೋಗುತ್ತವೆ. ಉಳಿಯೋದು ನಮ್ಮ ನಿಮ್ಮ ಸಂಬಂಧ, ಪ್ರೀತಿ ವಿಶ್ವಾಸ. ನನ್ನ ಗುರುತಿಸೋದು ಅಂಬರೀಶ್‌ ಅಣ್ಣನ ಮಗ. ಮಂಡ್ಯದ ಗಂಡಿನ ಮಗ ಎಂದು ಗುರುತಿಸುತ್ತಾರೆ. ಏನಾದರೂ ಇದನ್ನು ಕಿತ್ತುಕೊಳ್ಳೋಕೆ ಆಗಲ್ಲ ಎಂದು ಆರ್ಭಟಿಸಿದರು.

ದೇವರ ಮೇಲೆ ಆಣೆ ಮಂಡ್ಯ ಬಿಟ್ಟು‌ ಹೋಗಲ್ಲ‌

ದೇವರ ಮೇಲೆ ಆಣೆ ಮಾಡಿದ್ದೇನೆ, ನಾವು ಮಂಡ್ಯ ಬಿಟ್ಟು‌ ಹೋಗಲ್ಲ‌. ನಾನು ನಮ್ಮ ತಾಯಿ ಮಂಡ್ಯದ ಜೊತೆಯೇ ಇರ್ತೀವಿ. 5 ವರ್ಷ ನಮ್ಮ ತಾಯಿ ಕಷ್ಟಗಳನ್ನು ಎದುರಿಸುವುದು ನನಗೆ ಗೊತ್ತು. ಎರಡು ವರ್ಷ ಕೊರೋನಾದಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅಂಬರೀಶ್ ಅಣ್ಣ ಮಾಡಿರುವ ಕೆಲಸಗಳು ಸದಾ ಇರುತ್ತವೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು.

RELATED ARTICLES

Related Articles

TRENDING ARTICLES