Thursday, May 9, 2024

ಜೆಡಿಎಸ್ ಪಾರ್ಟಿ ಇರುವುದಿಲ್ಲ,ಪಕ್ಷ ತೊರೆದು ನೀವೆಲ್ಲರೂ ಬನ್ನಿ: ಡಿಕೆಶಿ ಕರೆ 

ಬೆಂಗಳೂರು: ಮುಂದೆ ಜೆಡಿಎಸ್ ಪಾರ್ಟಿ ಇರುವುದಿಲ್ಲ,ಪಕ್ಷ ತೊರೆದು ನೀವೆಲ್ಲರೂ ಬನ್ನಿ ಎಂದು ಡಿ.ಕೆ ಶಿವಕುಮಾರ್ ಜೆಡಿಎಸ್​ ನಾಯಕರಿಗೆ ಕರೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ಗಾಳಿ ಬೀಸ್ತಿದೆ.ಅದಕ್ಕೆ ಬಿಜೆಪಿ ಹಲವರಿಗೆ ಟಿಕೆಟ್ ಕೊಟ್ಟಿಲ್ಲ.ಯಾರು ಕುಮಾರಸ್ವಾಮಿ ಸರ್ಕಾರ ತಗೆದ್ರು ಅವರಿಗೆನೇ ಕುಮಾರಸ್ವಾಮಿ ಸಪೋರ್ಟ್ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ಹೆಸರು ಪ್ರಸ್ತಾಪಿಸಿದ ಡಿಕೆಶಿ ಮಾತನಾಡಿದ್ದರು.

ಕೆಪಿ‌ಬಚ್ಚೇಗೌಡರು ತುಚ್ಚವಾಗಿ ಕಂಡ್ರು ಅಂತ ಬಂದಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಬಂದಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ‌ಜಾತಿ ನೀತಿ ಅಂತ ಮಾಡ್ತಿದ್ದಾರೆ.ನಾವು ಎಂಟು ಮಂದಿ ಒಕ್ಕಲಿಗರಿಗೆ ಕೊಟ್ಟಿದ್ದೇವೆ.

ಅಳಿಯನನ್ನೇ ಬೇರೆ ಪಾರ್ಟಿಯಲ್ಲಿ ನಿಲ್ಲಿಸಿದ್ದಾರೆ. ಮುಂದಕ್ಕೆ ದಳ ಇರೋದಿಲ್ಲ ನಾನು ಜೆಡಿಎಸ್ ಮಾಜಿ,ಹಾಲಿ ಶಾಸಕರಿಗೆ ಮನವಿ ಮಾಡ್ತೇನೆ ಜೆಡಿಎಸ್ ತೊರೆದು ನೀವೆಲ್ಲರೂ ಬನ್ನಿ.ಸಿಎಂ ಇಬ್ರಾಹಿಂ ಮಗ ಕೂಡ ಅರ್ಜಿ ಹಾಕಿದ್ದಾರೆ ಎಂದು ಜೆಡಿಎಸ್ ನಾಯಕರಿಗೆ ಡಿಕೆಶಿ ಕರೆ ನೀಡಿದ್ದರು.

RELATED ARTICLES

Related Articles

TRENDING ARTICLES