Thursday, May 9, 2024

ನಾನು ಗೆದ್ರೆ ಮುಟ್ಟಲಾಗಲ್ಲ,ಸೋತ್ರೆ ಕತೆ ಮುಗೀತು ಅಂತ ಹೇಳಲು ಸಿಎಂ ಹೊರಟಿದ್ದಾರೆ: ಜಿ.ಟಿ ದೇವೇಗೌಡ

ಬೆಂಗಳೂರು: ನಾನು ಗೆದ್ರೆ ಮುಟ್ಟಲಾಗಲ್ಲ,ಸೋತ್ರೆ ಕತೆ ಮುಗೀತು ಅಂತ ಹೇಳಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ. 

ಸಿಎಂ ಲೀಡ್ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನನಾಡಿದ ಅವರು,ಅವರ ಮನಸ್ಸಿನಲ್ಲಿ ಇರೋದು ಹೇಳಿದ್ದಾರೆ.ಸಿಎಂ ಆಗಬೇಕು, ಡಿಸಿಎಂ ಬದಲಿಸಬೇಕು ಅಂತ ಅವರ ಪಕ್ಷದವರೇ ಮಾತಾಡಿಕೊಂಡಿದ್ದಾರೆ.ನಾನು ಗೆದ್ರೆ ಮುಟ್ಟಲಾಗಲ್ಲ,ನಾನು ಸೋತ್ರೆ ಕತೆ ಮುಗೀತು ಅಂತ ಹೇಳಲು ಹೊರಟಿದ್ದಾರೆ ಎಂದರು.

ಸಿಂಪತಿ ಕ್ರಿಯೇಟ್ ಮಾಡುತ್ತಿದ್ದಾರೆ

ಕಾಂಗ್ರೆಸ್​ಗೆ ಸೋಲಿನಭೀತಿ ಇದೆ ಅದಕ್ಕಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕ ಗೃಹಸಚಿವ ಅಮಿತ್ ಶಾ ಇಂದು ಕೋರ್ ಕಮಿಟಿ ಮುಖಂಡರು ಸಭೆ ಕರೆದಿದ್ದಾರೆ.
ನಮ್ಮ ಕಡೆಯಿಂದ ಆರು ಮುಖಂಡರ ಸಭೆ ಕರೆದಿದ್ದಾರೆ.ಎರಡೂ ಪಕ್ಷದ ಮುಖಂಡರ ಸಭೆ ಕರೆದು, ಚುನಾವಣೆ ಹೇಗೆ ಸಾಗುತ್ತಿದೆ. ಮುಕ್ತವಾಗಿ ಚರ್ಚೆ ಮಾಡಿ. 28 ಕ್ಷೇತ್ರ ಗೆಲ್ಲುವ ಗುರಿ ಇದೆ ಎಂದರು.

RELATED ARTICLES

Related Articles

TRENDING ARTICLES