Thursday, May 9, 2024

ಆ.. ಸಚಿವ ವೋಟು ಹಾಕ್ಲಿಲ್ಲ ಅಂದ್ರೆ ರಸ್ತೆ ಮಾಡಲ್ಲ ಅಂತಾನೆ, ಅವನ ಗರ್ವ ಭಂಗ ಮಾಡಲೇಬೇಕು : ಮಾಜಿ ಶಾಸಕ ಸುರೇಶಗೌಡ

ಮಂಡ್ಯ : ಉಸ್ತುವಾರಿ ಸಚಿವ ನೀವು ವೋಟು ಹಾಕಲಿಲ್ಲ ಅಂದರೆ ರಸ್ತೆ ಮಾಡಲ್ಲ ಅಂತಾನೆ. ಅವನ ಗರ್ವ ಭಂಗ ಮಾಡಲೇಬೇಕು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ‌ ಸುರೇಶಗೌಡ ವಾಗ್ದಾಳಿ ನಡೆಸಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರಂಕಾರದ ಮಾತುಗಳನ್ನು ಉಸ್ತುವಾರಿ ಸಚಿವ ಆಡುತ್ತಿದ್ದಾನೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಮತದಾರರಿಗೆ ಕರೆ ಕೊಟ್ಟರು.

ಅಹಂಕಾರ.. ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ದುರಂಕರದಲ್ಲಿ ಕಾಂಗ್ರೆಸ್​ ನಾಯಕರು ಮೆರೆಯುತ್ತಿದ್ದಾರೆ. ಅವರ ಗರ್ವವನ್ನ ಭಂಗ ಮಾಡಲೇಬೇಕು. ಇಲ್ಲದಿದ್ದರೇ ಹಣವಂತರು ಬರ್ತಾರೆ, ಅಧಿಕಾರಕ್ಕೆ ಬರ್ತಾರೆ‌. ಮಂಡ್ಯ ಕಾಂಗ್ರೆಸ್ ನಲ್ಲಿ ಯಾರು ಒರಿಜಿನಲ್ ಕಾಂಗ್ರೆಸ್​ ನಾಯಕರು ಇಲ್ಲ. ಪಕ್ಷಕ್ಕಾಗಿ ಬಾವುಟ ಕಟ್ಟದವರನ್ನ ಅಭ್ಯರ್ಥಿ ಮಾಡಿದ್ದಾರೆ. ನಿಷ್ಠವಂತ ಕಾರ್ಯಕರ್ತರ ಕಥೆ ಏನಾಗಬೇಕು? ಎಂದು ಕಿಡಿಕಾರಿದರು.

ನಿಖಿಲ್​ನ ಮತ್ತೆ ಗೆಲ್ಲಿಸಬೇಕು ಅಂತಿದ್ವಿ

ಪುಟ್ಟರಾಜು ಅವರನ್ನು ಮೈತ್ರಿ ಅಭ್ಯರ್ಥಿ ಎಂದು ತೀರ್ಮಾನ ಮಾಡಿದ್ದೆವು. ಆದ್ರೆ, ಕಾರ್ಯಕರ್ತರಿಂದ ಬಂದ ಒತ್ತಡದಿಂದ ಕುಮಾರಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಹಲವು ಬಾರಿ ಕುಮಾರಣ್ಣ ತಲೆಕೊಟ್ಟಿದ್ದಾರೆ. ಮೂರನೇ ಬಾರಿ ಹಾರ್ಟ್ ಆಪರೇಷನ್ ಆಗಿದ್ರೂ, ಜನರಿಗಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ನಿಖಿಲ್ ಅವರನ್ನ ಮತ್ತೆ ಗೆಲ್ಲಿಸಬೇಕು ಎಂದು ನಿರ್ಧಾರ ಮಾಡಿದ್ದೆವು. ಆದರೆ, ನಿಖಿಲ್ ಅವರು ದೇವೇಗೌಡ್ರು ಹಾಗೂ ಕುಮಾರಣ್ಣ ಯಾರು ಹೇಳಿದ್ರು ಸ್ಪರ್ಧೆ ಮಾಡಲ್ಲ ಅಂದರು. ಅದಕ್ಕಾಗಿ ಇಂದು ಕುಮಾರಣ್ಣರನ್ನ ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಾರೆ

ಕೆಲವರು ಸೋತ ಪಕ್ಷವನ್ನು ಬಿಟ್ಟು ಅಧಿಕಾರದ ಪಕ್ಷ ಸೇರ್ತಾರೆ. ಆದ್ರೆ, ಅಧಿಕಾರದಲ್ಲಿ ಇರುವ ಪಕ್ಷ ಬಿಟ್ಟು ಅಮರಾವತಿ ಹಾಗೂ ಬೆಂಬಲಿಗರು ನಮ್ಮ ಪಕ್ಷ ಸೇರುತ್ತಿದ್ದಾರೆ. ಆದ್ದರಿಂದ ಅವರೇ ನಾವು ಆತ್ಮೀಯರು ಎಂದು ತಿಳಿದುಕೊಳ್ಳಬೇಕು. ಕುಮಾರಣ್ಣ ಕೇವಲ ಎಂಪಿಯಾಗಲು ಸ್ಪರ್ಧೆ ಮಾಡ್ತಿಲ್ಲ. ಬಿಜೆಪಿ ಹೈಕಮಾಂಡ್ ನೀವು ನಿಲ್ಲಲೇಬೇಕು ಎಂದ್ರು. ಸುಮ್ಮ ಸುಮ್ಮನೆ ಸ್ಪರ್ಧೆ‌ ಮಾಡೋಕೆ ಹೇಳ್ತಾರಾ..? ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಾರೆ ಎಂದು ಸುರೇಶಗೌಡ ತಿಳಿಸಿದರು.

RELATED ARTICLES

Related Articles

TRENDING ARTICLES