Sunday, May 5, 2024

ಚಿನ್ನಕ್ಕಾಗಿ ಅತ್ತೆಯನ್ನು ಕೊಂದ ಅಳಿ ಕಲ್ಲಿನ ಕೂಚಕಟ್ಟಿ ಕೆರೆಗೆ ಎಸೆದ ಅಳಿಯ

ಶಿವಮೊಗ್ಗ : ಚಿನ್ನದ ಆಸೆಗಾಗಿ ವೃದ್ದ ಮಹಿಳೆಯೊಬ್ಬರನ್ನು ಹತೈಗೈದು ಮೃತದೇಹಕ್ಕೆ ಕಲ್ಲಿನ ಕೂಚವನ್ನು ಕಟ್ಟಿ ಕೆರೆಯಲ್ಲಿ ಬಿಸಾಡಿರುವ ಘಟನೆ  ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ ಪೇಟೆ ಸಮೀಪದ ಹುಂಚ ಗ್ರಾಮದ ಮತ್ತಿನಕೆರೆಯಲ್ಲಿ ನಡೆದಿದೆ.

ಹೊಳಲೂರು ಗ್ರಾಮದ ಜಯಮ್ಮ (62) ಮೃತ ದುರ್ದೈವಿ, ಕೋಡೂರು ನಿವಾಸಿ ಮಯೂರ (24) ಹತ್ಯೆ ಮಾಡಿದ ಯುವಕ, ಆರೋಪಿ ಮಯೂರ ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿ ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಿಪ್ಪನಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Bagalkote Loksabha Election Survey 2024 : ಗದ್ದಿಗೌಡ್ರಿಗೆ ಸಂಯುಕ್ತಾ ಪಾಟೀಲ್ ಪ್ರಬಲ ಪೈಪೋಟಿ

ಮಾ‌18ರಂದು ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಘಟನೆಯ ಹಿನ್ನೆಲೆ :

ಕೋಡೂರು ಯಳಗಲು ಗ್ರಾಮದ ಮಯೂರ, ತನ್ನ ಅಪ್ರಾಪ್ತ ಸ್ನೇಹಿತರಿಬ್ಬರು ತನ್ನ ಅತ್ತೆ ಜಯಮ್ಮ ಬಳಿ ಹಣ ಮತ್ತು ಬಂಗಾರ ಇದ್ದು ಇದನ್ನು ಲಪಟಾಯಿಸುವ ಸ್ಕೆಚ್​ ಹಾಕಿದ್ದಾರೆ, ಬಳಿಕ ಮೃತ ಜಯಮ್ಮನನ್ನು ಕಾರಿನಲ್ಲಿ ಕೂರಿಸಿ, ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಬಳಿಕ ಮೃತ ದೇಹಕ್ಕೆ ಕಲ್ಲಿನ ಕೂಚವನ್ನು ಹಗ್ಗದಿಂದ ಕಟ್ಟಿ ಮುತ್ತಿನಕೆರೆಯಲ್ಲಿ ಮೃತದೇಹವನ್ನು ಎಸೆದಿದ್ದರು. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES