ಶಿವಮೊಗ್ಗ: ಹಿಂದುತ್ವದ ಬಗ್ಗೆ ನಮ್ಮ ಫ್ಯಾಮಿಲಿ ಕೆ.ಎಸ್ ಈಶ್ವರಪ್ಪನಿಂದ ಕಲಿಯಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದುತ್ವದ ಬಗ್ಗೆ ಈಶ್ವರಪ್ಪನವರಿಂದ ನಮ್ಮ ಕುಟುಂಬ ಕಲಿಯಬೇಕಾಗಿಲ್ಲ.ಮೊನ್ನೆಯವರೆಗೆ ಈಶ್ವರಪ್ಪ ಬಿಜೆಪಿ ಪರ ಮಾತಾಡುತ್ತಿದ್ದರು.ಈಗ ಕಾಂತೇಶ್ ಗೆ ಟಿಕೆಟ್ ಸಿಕಿಲ್ಲ ಅಂತ ಈಗ ಮಾತನಾಡುತ್ತಿದ್ದಾರೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.ವಿಜಯೇಂದ್ರನ ಬಗ್ಗೆ ವಿಶ್ವಾಸ ಇಲ್ಲ ಎಂದರೆ ಅವತ್ತೆ ಕೇಳಬಹುದಿತ್ತು. ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡೆಯುತ್ತಿದೆ.ಯಾವುದೇ ಕುಟುಂಬದ ವಿಚಾರವಾಗಿ ಚುನಾವಣೆ ನಡೆಯುತ್ತಿಲ್ಲ ಎಂದರು.
ವಿಜಯೇಂದ್ರ ಮರಿ ಹುಲಿ ಎಂದ ಈಶ್ವರಪ್ಪ ಈಗ ಬೇಡವಾಯ್ತಾ..?
ಸತ್ಯಕ್ಕೆ ದೂರವಾದ ಸಂಗತಿಗಳನ್ನ ಈಶ್ವರಪ್ಪನವರು ಹೇಳುತ್ತಿದ್ದಾರೆ.ಸ್ವಾಮೀಜಿಗಳಿಗೆ ನಾನು ಬೆದರಿಕೆ ಹಾಕಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ನಾನು ಬಂದು ದೇವರಿಗೆ ಘಂಟೆ ಹೊಡೆಯುತ್ತೇನೆ.ಅವರು ಸಹ ಬಂದು ಘಂಟೆ ಹೊಡೆಯಲಿ.ಈ ಮಾತಿನಿಂದ ನೋವಾಗಿದೆ ನನಗೆ ಇದೆ ಎಂದರು.
ಯಡಿಯೂರಪ್ಪ ಕುಟುಂಬ ಸ್ವಾರ್ಥಿಗಳ ಕುಟುಂಬ ಅಂತ ಹೇಳಿದ್ದಾರೆ. ಹೃಯದಪೂರ್ವಕವಾಗಿ ಕಾಂತೇಶ್ ಗೆ ಟಿಕೆಟ್ ಸಿಗಲಿ ಅಂತ ಆಶೀರ್ವಾದ ಮಾಡಿದ್ದೇವು.
ಸತ್ಯಕ್ಕೆ ದೂರವಾದ ಸಂಗತಿಗಳನ್ನ ಈಶ್ವರಪ್ಪನವರು ಹೇಳುತ್ತಿದ್ದಾರೆ.ಸ್ವಾಮೀಜಿಗಳಿಗೆ ನಾನು ಬೆದರಿಕೆ ಹಾಕಿದ್ದೇನೆ ನಾನು ಬಂದು ದೇವರಿಗೆ ಘಂಟೆ ಹೊಡೆಯುತ್ತೇನೆ. ಅವರು ಸಹ ಬಂದು ಘಂಟೆ ಹೊಡೆಯಲಿ.ಈ ಮಾತಿನಿಂದ ನೋವಾಗಿದೆ ಎಂದರು.