Saturday, April 27, 2024

135 ಸೀಟ್ ಬಂದ್ಮೇಲೆ ಯಾರ ಗರ್ವ ಭಂಗ ಆಗಿದೆ ಎಲ್ಲರಿಗೂ ಗೊತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಕಲಬುರಗಿ: ಕಾಂಗ್ರೆಸ್ ಸೋಲಿಸುವ ಮೂಲಕ ಸಿದ್ದರಾಮಯ್ಯ ಗರ್ವ ಭಂಗ ಮಾಡಿ ಎನ್ನುವ ದೇವೇಗೌಡರ ಹೇಳಿಕೆಗೆ ಪ್ರೀಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜೇವರ್ಗಿ ಪಟ್ಟಣದಲ್ಲಿ ದೇವೇಗೌಡರ ಹೇಳಿಕೆಗೆ ಮಾತನಾಡಿದ ಅವರು, ತಾಕತ್ತಿದ್ರೆ ಬಿಜೆಪಿ ಅಲೆ ತಡಿರಿ ಅಂತ ಕೆಲವರು ಮೇಜು ಕುಟ್ಟಿ ಕುಟ್ಟಿ ಹೇಳಿದ್ರಲ್ವಾ? ಫಲಿತಾಂಶ ಏನಾಯ್ತು?ಪ್ರಜಾಪ್ರಭುತ್ವದಲ್ಲಿ ಯಾರ ಗರ್ವ ಭಂಗ ಮಾಡಬೇಕು? ಯಾರನ್ನು ಎತ್ತಿ ಹಿಡಿಬೇಕು ಅನ್ನೋದು ಜನ ತೀರ್ಮಾನ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಜೆಡಿಎಸ್ ನವರು ಸ್ಟ್ರಾಂಗ್ ಇದ್ರೆ ಮೈತ್ರಿ ಯಾಕೆ ಮಾಡಿಕೊಂಡ್ರು ?

ಮನೆಯವರನ್ನು ಬಿಜೆಪಿ ಟಿಕೆಟ್ ಮೇಲೆ ನಿಲ್ಲಿಸಿ ಗರ್ವ ಭಂಗ ಬಗ್ಗೆ ಮಾತಾಡ್ತಿರಲ್ವಾ? ಇದು ನಿಮಗೆ ಶೋಭೆ ತರುತ್ತಾ ? ದೇವೇಗೌಡರ ವಿರುದ್ದ ಪ್ರೀಯಾಂಕ್ ಖರ್ಗೆ ತ್ರೀವ ಆಕ್ರೋಶ ವ್ಯಕ್ತಪಡಿಸಿದ್ದರು.

ದೇವೇಗೌಡರ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡಲಾರೆ.ಅವರು ನೂರೈವತ್ತು ವರ್ಷ ಬಾಳಲಿ.ಅವರ ಸೇವೆ ಇದೆ ಆ ಬಗ್ಗೆ ನಾನು ಮಾತನಾಡಲಾರೆ.ಆದ್ರೆ ಜೆಡಿಎಸ್ ಗೆ ಶಕ್ತಿ ಇದ್ದಿದ್ರೆ ಕಲ್ಯಾಣ ಕರ್ನಾಟಕದಲ್ಲಿ ನಾಲ್ಕು ಸೀಟ್ ದಾಟಿದ್ದಾರ ಎಂದು ಪ್ರಶ್ನೆ ಮಾಡಿದ್ದರು.

RELATED ARTICLES

Related Articles

TRENDING ARTICLES