ಬೆಂಗಳೂರು: ಹೃದಯವಂತ ಮತ್ತು ದುಷ್ಟರ ನಡುವೆ ನಡೆಯುವ ಚುನಾವಣೆ ಈ ಬಾರಿ ಗೆಲುವು ಖಚಿತ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬೆಂಗಳೂರು ದಕ್ಷಿಣದಲ್ಲಿ 3.45 ಲಕ್ಷ ಮತಗಳ ಅಂತರದಿಂದ ನಾವು ಗೆದ್ದಿದ್ದೇವೆ.ಈಗ ಐದು ಲಕ್ಷ ಅಂತರದಿಂದ ಗೆಲ್ಲಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಚುನಾವಣೆ ಬಗ್ಗೆ ಮಾತನಾಡಿದ ಅವರು,ಹೃದಯವಂತ ಮತ್ತು ದುಷ್ಟರ ನಡುವೆ ನಡೆಯುವ ಚುನಾವಣೆ ಅದನ್ನು ಗೆಲ್ಲಬೇಕು ಎಂದರು.ಕುಮಾರಸ್ವಾಮಿ ಅವರು ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ತೇಜಸ್ವಿ ಸೂರ್ಯ ಕೂಡ ಅದೇ ದಿನ ಸಲ್ಲಿಸುತ್ತಾರೆ.ಸೋಮಣ್ಣ 3ನೇ ತಾರೀಖು ನಾಮಪತ್ರವನ್ನು ಸಲ್ಲಿಕೆ ಮಾಡುತ್ತಾರೆ ಎಂದರು.
ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚುತ್ತಾ ಇದ್ದಾರೆ.ಅವರಿಗೆ ಸೋಲೊದು ಗ್ಯಾರಂಟಿ ಅಂತ ಅನಿಸಿದೆ ಎಂದು ವಿಪಕ್ಷನಾಯಕ ಆರ್.ಅಶೋಕ್ ಆರೋಪ ಮಾಡಿದ್ದರು.