Saturday, April 27, 2024

ನಾನು ಓದಿದ್ದು ಕೂಡ RSSನಲ್ಲಿ, ಆ ಸಂಸ್ಕಾರ ನಮಗೂ ಇದೆ : ಬಿ.ವೈ. ರಾಘವೇಂದ್ರ ತಿರುಗೇಟು

ಶಿವಮೊಗ್ಗ : ನಾನು ಓದಿದ್ದು ಕೂಡ ರಾಷ್ಟ್ರೀಯ ಸ್ವಯಂ ಸೇವ ಸಂಘದಲ್ಲಿ. ಆ ಸಂಸ್ಕಾರ ನಮಗೂ ಕೂಡ ಇದೆ ಎಂದು ಪರೋಕ್ಷವಾಗಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪರಿಗೆ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.

ಈಶ್ವರಪ್ಪ ಬಂಡಾಯ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇನ್ನೂ ನಾವು ತಾಳ್ಮೆಯಿಂದ ಕಾಯುತ್ತಿದ್ದೇವೆ. ನಮ್ಮ ಕುಟುಂಬ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಕುಟುಕಿದರು.

ಈ ಜಿಲ್ಲೆಯ ಜನರಿಗೆ ನಾವು ಭಾರವಾಗಿದ್ದೇವಾ..? ಅಥವಾ ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇವಾ..? ಇದಕ್ಕೆ ಮತದಾರರು ಚುನಾವಣೆಯಲ್ಲಿ ಉತ್ತರ ಕೊಡ್ತಾರೆ. ಯಡಿಯೂರಪ್ಪ ಅವರನ್ನು ವಿಜಯೇಂದ್ರ ಅವರನ್ನು ಗೆಲ್ಲಿಸಿದ್ದಾರೆ. ಈಶ್ವರಪ್ಪನವರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ನನಗೆ ಆಶೀರ್ವಾದ ಮಾಡಿದ್ರೆ..!

ಹಿಂದುತ್ವದ ಬಗ್ಗೆ ಈಶ್ವರಪ್ಪನವರು ಮಾತನಾಡುತ್ತಿದ್ದಾರೆ. ನಾನು ಓದಿದ್ದು ಕೂಡ ರಾಷ್ಟ್ರೀಯ ಸ್ವಯಂ ಸೇವ ಸಂಘದಲ್ಲಿ. ಆ ಸಂಸ್ಕಾರ ನಮಗೂ ಕೂಡ ಇದೆ. ಹಿಂದುತ್ವದ ಬಗ್ಗೆ ಹೇಳಿ ಪ್ರಚಾರ ತೆಗೆದುಕೊಳ್ಳುವ ಅವಶ್ಯಕತೆ ನಮಗಿಲ್ಲ. ನನಗೆ ಆಶೀರ್ವಾದ ಮಾಡಿದ್ರೆ, ಮೋದಿ ಅವರಿಗೆ ಬೆಂಬಲ ಕೋಡುತ್ತೇನೆ ಎಂದರು.

ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ

ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ಹಿಂದುತ್ವದ ಬಗ್ಗೆ, ನಮ್ಮ ಕುಟುಂಬದ ಬಗ್ಗೆ ಮಾತನಾಡಿದಕ್ಕೆ ನೋವಾಗಿದೆ. ಬರುವಂತಹ ದಿನಗಳು ಒಳ್ಳೆಯ ದಿನಗಳು ಬರುತ್ತವೆ. ನಾವು ಆಶಾವಾದಿಗಳು, ನಮಗೆ ಒಳ್ಳೆಯದಾಗುತ್ತೆ ಎನ್ನುವ ವಿಶ್ವಾಸ ಇದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

RELATED ARTICLES

Related Articles

TRENDING ARTICLES