ಚಾಮರಾಜನಗರ: ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಯತೀಂದ್ರ ಸಿದ್ದರಾಮಯ್ಯ ತ್ರೀವ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಸಂಬಂಧ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಓರ್ವ ಗುಂಡಾ, ರೌಡಿ. ಗುಜರಾತ್ನಲ್ಲಿ ನರಮೇದ ಮಾಡಿದ ಆರೋಪ ಹೊತ್ತಿದ್ದಾರೆ ಅವರು. ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
2 ಕೋಟಿ ಉದ್ಯೋಗ ಸೃಷ್ಠಿ ಅಂತ ಕೇಂದ್ರ ಸರ್ಕಾರ ಹೇಳಿತ್ತು.ಆದರೆ, ಕೆಲಸ ಎಲ್ಲಿ ಸಿಕ್ತು? ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡೋದು ಕೇಂದ್ರ ಸರ್ಕಾರದವರು ನಮ್ಮ ಹೊಣೆ ಅಲ್ಲ ಅಂತಾ ಈಗ ಹೇಳ್ತಾರೆ. ಇನ್ನು ಕಪ್ಪು ಹಣ ವಾಪಸ್ಸು ತರುತ್ತೇವೆ ಅಂದಿದ್ದರು. ತಂದ್ರಾ? ಅಟ್ ಲೀಸ್ಟ್ ಸ್ವಿಸ್ ಬ್ಯಾಂಕ್ನಲ್ಲಿ ಯಾರದೆಲ್ಲಾ ಖಾತೆಯಿದೆ ಅಂತಾ ಪಟ್ಟಿ ಕೂಡ ರಿಲೀಸ್ ಮಾಡ್ಲಿಲ್ಲ. ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಗೆ ಮಾಡಿ ಬಡ ಜನರ ಹೊಟ್ಟೆ ಮೇಮೇ ಬರೆ ಎಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಾಮರಾಜನಗರ ಲೋಕಸಭಾ ಚುನಾವಣೆ ಅಂಗವಾಗಿ ಇಂದು ಹನೂರಿನಲ್ಲಿ ಆಯೋಜಿಸಿದ್ದ
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಸಚಿವರುಗಳಾದ ಶ್ರೀ ಕೆ.ವೆಂಕಟೇಶ್, ಡಾ॥ಎಚ್.ಸಿ ಮಹದೇವಪ್ಪ ಅವರ ಜತೆಗೂಡಿ ಉದ್ಘಾಟಿಸಿ ಮಾತನಾಡಿದೆ.
1/2 pic.twitter.com/suDZAyZM8j— Dr Yathindra Siddaramaiah (@Dr_Yathindra_S) March 28, 2024
ಸಂವಿಧಾನ ಬದಲಾವಣೆ ಮಾಡೋದೆ ಇವರ ಹಿಡನ್ ಅಜೆಂಡಾ
400ಕ್ಕೂ ಹೆಚ್ಚು ಸ್ಥಾನ ಅಂತಾ ಹೇಳುತ್ತಾರೆ. 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡೋದೆ ಇವರ ಹಿಡನ್ ಅಜೆಂಡಾ ಆಗಿದೆ. ದೇಶದ ಇತಿಹಾಸದಲ್ಲೇ ಪ್ರಜಾ ಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇನ್ನು ಸಭೆಯಲ್ಲಿ ಸಚಿವರಾದ ಎಚ್.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ, ಅಭ್ಯರ್ಥಿ ಸುನೀಲ್ ಬೋಸ್ ಸೇರಿದಂತೆ ಮತ್ತಿತರರು ಇದ್ದರು.