Saturday, April 27, 2024

ಅದಿತಿ ವೆಡ್ಸ್ ಬೊಮ್ಮರಿಲ್ಲು ಸಿದ್ದಾರ್ಥ್.. ರಹಸ್ಯ ಮದ್ವೆ ರಟ್ಟು..!

ಫಿಲ್ಮಿಡೆಸ್ಕ್​ : ಬೊಮ್ಮರಿಲ್ಲು ಸಿದ್ದಾರ್ಥ್ ಹಾಗೂ ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಗುಟ್ಟಾಗಿ ಹಸೆಮಣೆ ಏರುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೇ, ಇದೆಲ್ಲಾ ಸುಳ್ಳು ನಾವಿಬ್ಬರು ಮದುವೆಯಾಗಿಲ್ಲ ಎಂಗೇಜ್ ಮೆಂಟೆ ಮಾಡಿಕೊಂಡಿದ್ಧೇವೆ ಎಂದು ಸಿದ್ದಾರ್ಥ್​ ತಮ್ಮ ಸಾಮಾಜಿಕ ಜಾಲತಾಣ ಇಸ್ಟಾಗ್ರಾಂನಲ್ಲಿ ಪೋಟೋ ಹಂಚಿಕೊಂಡು (ENGAGED)​ ಎಂದು ಬರೆದುಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮಹಾ ಸಮುದ್ರಂ.. 2021ರಲ್ಲಿ ತೆರೆಕಂಡ ತೆಲುಗು ಸಿನಿಮಾ. ಇದೊಂದು ಟ್ರಯಾಂಗಲ್ ಫ್ರೆಂಡ್​ಶಿಪ್ ಹಾಗೂ ಲವ್ ಸ್ಟೋರಿ ಆಗಿತ್ತು. ಇಲ್ಲಿ ನಟ ಶರವಾನಂದ್ ಹಾಗೂ ಸಿದ್ದಾರ್ಥ್ ಲೀಡ್​​ನಲ್ಲಿ ನಟಿಸಿದ್ರೆ, ಇವರಿಗೆ ನಾಯಕನಟಿಯಾಗಿ ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮನೋಜ್ಞ ಅಭಿನಯ ನೀಡಿದ್ದರು. ಆದ್ರೆ ಈ ಚಿತ್ರದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು ಮಾತ್ರ ಸಿದ್ದಾರ್ಥ್- ಅದಿತಿ ನಡುವಿನ ಹಸಿಬಿಸಿ ದೃಶ್ಯಗಳು ಹಾಗೂ ಇಂಟೆನ್ಸ್ ಲವ್ ಸ್ಟೋರಿ.

ಬಹುಶಃ ಅದೇ ಕಾರಣದಿಂದ ಆ ಚಿತ್ರದ ಬಳಿಕ ಅವರಿಬ್ಬರೂ ನಿಜ ಜೀವನದಲ್ಲಿ ಸಹ ತುಂಬಾನೇ ಕ್ಲೋಸ್ ಆದ್ರು ಅನಿಸುತ್ತೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ, ಪ್ರೇಮ, ಆಪ್ಯಾಯತೆ. ಸೋ  ಮದುವೆ ಆಗದೇನೇ ಲಿವ್ ಇನ್ ರಿಲೇಶನ್​ಶಿಪ್​​ನಲ್ಲಿದ್ದರು. ಇದೀಗ ಆ ಮೂರು ವರ್ಷದ ಲಿವ್ ಇನ್ ಸಂಬಂಧಕ್ಕೆ ಸಾಕ್ಷಿಯಾಗಿ ಹಸೆಮಣೆ ಏರುವುದಕ್ಕು ಮುನ್ನ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಹೌದು.. ಇದೇ ಮಾರ್ಚ್​ 27ರಂದು ತೆಲಂಗಾಣದ ಶ್ರೀರಂಗಪುರದಲ್ಲಿರೋ ಶ್ರೀರಂಗನಾಯಕಸ್ವಾಮಿ ಆಲಯದಲ್ಲಿ ಸರಳವಾಗಿ ಎಂಗೇಜ್​​ಮೆಂಟ್ ಮಾಡಿಕೊಳ್ಳುವ ಮೂಲಕ ಸಹಬಾಳ್ವೆಗೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರು ಹಾಗೂ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಿದ್ದ ಈ ತಾರಾಜೋಡಿ, ಬಹಳ ಗೌಪ್ಯವಾಗಿ ಮದ್ವೆ ಆಗಿರೋದ್ರ ಬಗ್ಗೆ ಸಾಕಷ್ಟು ಗುಮಾನಿಗಳು ಕೇಳಿ ಬರ್ತಿವೆ. ಆದ್ರೆ ಅವರಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಅಂದಹಾಗೆ ಸಿದ್ದಾರ್ಥ್ ತಮಿಳುನಾಡಿನ ಚೆನ್ನೈ ಮೂಲದವರು. ನಟ, ನಿರ್ಮಾಪಕನಾಗಿ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಅದರಲ್ಲೂ ಬಾಯ್ಸ್, ಬೊಮ್ಮರಿಲ್ಲು ಸಿದ್ದಾರ್ಥ್ ಅಂತಲೇ ಫೇಮಸ್ ಆದವ್ರು.

ಇತ್ತ ಅದಿತಿ ರಾವ್ ಹೈದರಿ ಆಂಧ್ರ ಮೂಲದವರು. ಈಕೆ ಕೂಡ ಸೌತ್​ನಿಂದ ಬಾಲಿವುಡ್​​ವರೆಗೆ ತಮ್ಮ ನಟನಾ ಗಮ್ಮತ್ತು ಸಾರಿದ ಅಭಿನೇತ್ರಿ. ಈಕೆಯ ಕಣ್ಣೇ ಈಕೆಗೊಂದು ವಿಶೇಷವಾದ ಆಭರಣ. ದೊಡ್ಡ ಸ್ಟಾರ್ಸ್​, ಸ್ಟಾರ್ ಡೈರೆಕ್ಟರ್ಸ್​ ಜೊತೆ ಮಿಂಚಿದವರು ಅದಿತಿ. ಆದ್ರೆ ಈಕೆಗೆ ಇದು ಮೊದಲ ಮದ್ವೆ ಅಲ್ಲ, 2002ರಲ್ಲೇ ವಕೀಲರಾದ ಸತ್ಯದೀಪ್ ಮಿಶ್ರಾರನ್ನ ವರಿಸಿದ್ದ ಅದಿತಿ, 2012ರಲ್ಲಿ ವಿಚ್ಚೇದನ ಪಡೆದಿದ್ದರು. ಸಿದ್ದಾರ್ಥ್​ಗೂ ಕೂಡ ಇದು ಎರಡನೇ ಮದ್ವೆ ಅಂದ್ರೆ ನೀವು ನಂಬಬೇಕು.

2003ರಲ್ಲೇ ಮೇಘನಾ ಅನ್ನೋರನ್ನ ಮದ್ವೆ ಆಗಿದ್ದ ನಟ ಸಿದ್ದಾರ್ಥ್, 2006ರ ವೇಳೆಗೆ ಅವರ ಸಂಬಂಧ ಮುರಿದುಬಿದ್ದಿತ್ತು. 2007ರಲ್ಲಿ ಡಿವೋರ್ಸ್​ ಕೂಡ ಪಡೆದಿದ್ರು. ಸೋ.. ಒಂದ್ಕಡೆ ಅದಿತಿ ಕೂಡ ವೈಯಕ್ತಿಯ ಜೀವನದಲ್ಲಿ ನೊಂದು, ಬೆಂದಿದ್ದರು. ಸಿದ್ದಾರ್ಥ್ ಪರಿಸ್ಥಿತಿ ಕೂಡ ಅದೇ ಆಗಿತ್ತು. ಹಾಗಾಗಿ ಈ ನೊಂದ ಮನಸುಗಳು ಕೂಡಿ ಇದೀಗ ಹೊಸ ಕನಸಿನ ಸಾಮ್ರಾಜ್ಯ ಕಟ್ಟಿದ್ದಾರೆ, ಸಂಸಾರ ನೌಕೆ ಹತ್ತಿ ಪ್ರೇಮಲೋಕದ ಪಯಣ ಬೆಳೆಸಿದ್ದಾರೆ. ಇಡೀ ಭಾರತೀಯ ಚಿತ್ರರಂಗದಿಂದ ಈ ತಾರಾಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

View this post on Instagram

 

A post shared by Siddharth (@worldofsiddharth)

 

 

RELATED ARTICLES

Related Articles

TRENDING ARTICLES