ಬೆಂಗಳೂರು: ಮಂಡ್ಯ ಕೋಲಾರ ಹಾಸನ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಮತ್ತು ಬಿಜೆಪಿ ಮೈತ್ರಿಯಾಗಿದ್ದೇವೆ
ನಮಗೆ ಮೂರು ಕ್ಷೇತ್ರಗಳನ್ನ ಬಿಜೆಪಿ ಬಿಟ್ಟುಕೊಟ್ಟಿದೆ.ಇನ್ನು ಮುಂದೆ ಬಿಜೆಪಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಬಾರದು.ಸಭೆ ಸಮಾರಂಭಗಳಲ್ಲಿ ಸನಾಂತರವಾಗಿ ಎರಡು ಪಕ್ಷದ ಚಿಹ್ನೆ ಬಳಸುವಂತೆ ಸೂಚನೆ ನೀಡಿದ್ದಾರೆ.
ಕ್ಷೇತ್ರದ ಘೋಷಣೆ ಜೊತೆಗೆ ಕಾರ್ಯಕರ್ತರು,ಶಾಸಕರು,ಜೆಡಿಎಸ್ ಮುಖಂಡರಿಗೆ ಹೆಚ್.ಡಿ ಕುಮಾರಸ್ವಾಮಿ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕುಮಾರಸ್ವಾಮಿ ಸೂಚನೆ.
ಲೋಕಸಭಾ ಚುನಾವಣೆ ನಾವು ಬಿಜೆಪಿ ಜೊತೆ ಸೇರಿ ಎದುರಿಸುತ್ತಿದ್ದೇವೆ.ಚುನಾವಣಾ ಪ್ರಚಾರ ಸಭೆಗಳಲ್ಲಿ ಎರಡೂ ಪಕ್ಷಗಳ ನಾಯಕರ ಫೋಟೋ ಗಳನ್ನು ಬೇದಭಾವವಿಲ್ಲದೇ ಪ್ರದರ್ಶಿಸಬೇಕು.ಎರಡು ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು.ಎರಡೂ ಪಕ್ಷಗಳ ಬಾವುಟಗಳನ್ನು ಪ್ರಚಾರ ಸಭೆಗಳಲ್ಲಿ ಬಳಸಬೇಕು.ಯಾವುದೇ ಭೇದಬಾವ ತೋರದೇ ಒಂದಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.