Thursday, May 9, 2024

ಶ್ರೀರಾಮ ಏನಾದ್ರೂ ಹೊಟ್ಟೆ ತುಂಬಿಸ್ತಾನಾ? : ಶಾಸಕ SR ಶ್ರೀನಿವಾಸ್

ತುಮಕೂರು : ಶ್ರೀರಾಮ ಏನಾದ್ರೂ ಹೊಟ್ಟೆ ತುಂಬಿಸ್ತಾನಾ? ನಾನು ಭಜನೆ ಮಾಡಿ ಬಿಡ್ತೀನಿ ಎಂದು ಕಾಂಗ್ರೆಸ್​ ಶಾಸಕ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಯಾವ ಕೆಲಸನೂ ಮಾಡಿಲ್ಲ. ಚುನಾವಣೆ ಬಂತು ಅಂದ್ರೆ ಸಾಕು, ಯಾವುದಾದರೂ ಒಂದು ವಿಚಾರ ತೆಗೆಯುತ್ತಾರೆ ಎಂದು ಟೀಕಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ನಡೀತು. ಈ ಸಲ ಶುರು ಮಾಡಿದ್ದಾನೆ ಶ್ರೀರಾಮ ಮಂದಿರ ಕಟ್ಟಿಸಿದ್ದೀನಿ ಅಂತ. ಏನು ಇವರ ಅಪ್ಪನ ಮನೆ ದುಡ್ಡು ಹಾಕಿ ಕಟ್ಟಿಸಿದ್ದಾನೆ. ಈ ದೇಶದ ಪ್ರತಿಯೊಬ್ಬ ಪ್ರಜೆ ಕೊಟ್ಟಿರೋ ಹಣ. ನೀವು ಕಳಿಸಿರೋ ದುಡ್ಡು ಅದು. ರಾಮ ಏನಾದ್ರೂ ಹೊಟ್ಟೆ ತುಂಬಿಸ್ತಾನಾ? ಹೇಳಿ ನಾನು ಭಜನೆ ಮಾಡಿ ಬಿಡ್ತೀನಿ ಎಂದು ಹೇಳಿದ್ದಾರೆ.

ಮೋದಿ ಬಂದಾಗ ಹಿಡ್ಕೊಂಡು ಕೇಳಿ

ಅಷ್ಟೊಂದು ಬಿಗಿ ಭದ್ರತೆ ಜಾಗದಲ್ಲಿ 47 ಜನ ಸೈನಿಕರ ಹತ್ಯೆ ಮಾಡ್ತಾರೆ ಅಂದ್ರೆ ಇದು ಮೋದಿ ಮಾಡಿಸುವ ಮರ್ಡರ್. ಇದೇನಾದ್ರು ತನಿಖೆಯಾಗಿದ್ಯಾ..? ಯಾರನ್ನಾದರೂ ಬಂದಿಸಿದ್ದಾರಾ..? ಜೈಲಿಗೆ ಹಾಕಿದ್ದಾರಾ? ನೀವು ಯಾಕೆ ಪ್ರಶ್ನೆ ಮಾಡಿಲ್ಲ, ಬಂದಾಗ ಹಿಡಿದುಕೊಂಡು ನೀವು ಕೇಳಿ. ಒಬ್ಬನನ್ನೂ ಗುರುತಿಸೋಕೆ ಸಾಧ್ಯವಾಗಿಲ್ಲ. ಆ ಕೇಸ್ ಏನಾಯ್ತು ಅಂತಾನೆ ಗೊತ್ತಿಲ್ಲ. ಪುಲ್ವಾಮಾ ಮಾಡಿದ್ರು, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದ್ರು. ಮೋದಿ ಮಾಡಿದ.. ಮಾಡಿದ.. ಅಂತ ವೋಟು ಹಾಕಿದ್ದೇ ಹಾಕಿದ್ದು ಎಂದು ಜರಿದಿದ್ದಾರೆ.

ಮೋದಿಯವರ ಅಪ್ಪ ಕಟ್ಟಿದ್ನಾ ಸ್ಕೂಲ್..?

ಇವನು ಸರ್ವಾಧಿಕಾರಿಯಾಗ್ತಾನೆ. ಹಿಟ್ಲರ್ ಮೀರಿಸುವ ಮನಸ್ಥಿತಿ ಒಂದಿರೋನು ಇವನು ಮೋದಿ. ಆ ಕಾರಣಕ್ಕೆ ತೊಲಗಲೇ ಬೇಕು ಈ ಪೀಡೆ. ಬರೀ ಸುಳ್ಳು.. ಸುಳ್ಳು. ಆರ್​ಎಸ್​ಎಸ್​ ಅಂತ ಒಂದು ಕೇಂದ್ರ ಇಟ್ಟುಕೊಂಡು ಇದ್ದಾನೆ. ಆರ್​ಎಸ್​ಎಸ್​ ಸುಳ್ಳನ್ನೇ ಹೇಳಿಕೊಡುವ ಒಂದು ಸಂಸ್ಥೆ. ಕಾಂಗ್ರೆಸ್ ಮಾಡಿಲ್ಲ ಅಂತ ಹೇಳ್ತಾನೆ ಮೋದಿ. ಮೋದಿ ಎಲ್ಲಿ ಓದಿದಾ..? ಆ ಸ್ಕೂಲ್ ಕಟ್ಟಿದ್ದು ಯಾರು? ಮೋದಿಯವರ ಅಪ್ಪ ಕಟ್ಟಿದ್ನಾ ಸ್ಕೂಲ್..? ಇಂದಿರಾ ಗಾಂಧಿ ರಷ್ಯಾದಿಂದ ಗೋಧಿ ತಂದು ಕೊಟ್ಟಿದ್ರು. ಅಂತಹ ಒಂದು ಕೆಲಸ ಮೋದಿ ಮಾಡಿದ್ನಾ? ಎಂದು ಏಕವಚನದಲ್ಲೇ ಶಾಸಕ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES