ಬೆಂಗಳೂರು : ನಗರದಲ್ಲಿ ದಿನೇ ದಿನೇ ನೀರಿನ ಅಭಾವದ ವರಿಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಜನತೆಗೆ ಜಲಮಂಡಳಿ ಶಾಕ್ ನೀಡಲು ಮುಂದಾಗಿದೆ.
ಅಂತರ್ಜಲ ಮಟ್ಟ ಕುಸಿತದಿಂದ ಈಗಾಗಲೇ ಕೊಳವೆ ಬಾವಿಗಳು ಬತ್ತಿಹೋಗಿದ್ದು ನೀರಿನ ಅಭಾವ ಹೆಚ್ಚಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆ ನಗರದಲ್ಲಿನ ಖಾಸಗಿ ಸಹಭಾಗಿತ್ವದ ಕೊಳವೆಬಾವಿಗಳನ್ನು ಜಲಮಂಡಳಿ ವಶಕ್ಕೆ ಪಡೆದು ಕೊಳ್ಳಲಿದೆ.
ಇದನ್ನೂ ಓದಿ: Sonu Srinivas Gowda: ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್
ನಗರದಲ್ಲಿನ 20ಸಾವಿರ ಚದರ ಅಡಿ ಮೆಲ್ಪಟ್ಟ ಕಟ್ಟಡ ನಿರ್ಮಾಣದ ಪ್ರದೇಶದಲ್ಲಿರುವ ಕೊಳವೆಬಾವಿ ಜಲಮಂಡಳಿ ಸುಪರ್ದಿಗೆ ಪಡೆಯುವ ಮೂಲಕ ಜಲಕ್ಷಾಮವನ್ನು ತಡೆಗಟ್ಟಲು ಜಲಮಂಡಳಿ ಮುಂದಾಗಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ಸಮಾನವಾಗಿ ನೀರು ಒದಗಿಸಲು ಚಿಂತನೆ ನಡೆಸಿದೆ.
ಇನ್ನು, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾದ್ ಮನೋಹರ್ ಅವರು ಕಟ್ಟಡ ನಿರ್ಮಾಣ ಮಾಲೀಕರಿಗೆ ಖಡಕ್ ಸೂಚನೆಯೊಂದನ್ನು ನೀಡಿದ್ದು, ನೂತನವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವವರು ನಗರದಲ್ಲಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವಂತೆ ತಿಳಿಸಿದೆ, ಇದನ್ನು ಜಲಮಂಡಳಿಯಿಂದ ಕೇಳಿ ಪಡೆಯುವಂತೆ ತಿಳಿಸಿದ್ದಾರೆ.