Thursday, May 9, 2024

CSK ನಾಯಕತ್ವಕ್ಕೆ ಧೋನಿ ವಿದಾಯ, ಚೆನ್ನೈಗೆ ಋತುರಾಜ್ ಕ್ಯಾಪ್ಟನ್

ಬೆಂಗಳೂರು : ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್​ ಕಿಂಗ್ಸ್​ ನಾಯಕತ್ವಕ್ಕೆ ಗುಡ್​ಬೈ ಹೇಳಿದ್ದಾರೆ.

ನಾಳೆಯಿಂದಲೇ ಐಪಿಎಲ್-2024 ಟೂರ್ನಿ ಆರಂಭವಾಗಲಿದ್ದು, CSK ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಚೆನ್ನೈ ತಂಡ ಎಕ್ಸ್​ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಧೋನಿ ಬದಲಿಗೆ ಚೆನ್ನೈ ತಂಡ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಸದ್ಯ ಐಪಿಎಲ್ ಟ್ರೋಫಿಯೊಂದಿಗೆ 10 ತಂಡಗಳ ನಾಯಕರು ನೀಡಿದ ಫೋಟೋ ಶೂಟ್​ನಲ್ಲಿ ಧೋನಿ ಬದಲು ಋತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ.

ಮೊದಲೇ ಸುಳಿವು ನೀಡಿದ್ದ ಧೋನಿ

ಐಪಿಎಲ್-2024​ಗೂ ಮುನ್ನವೇ ಎಂ.ಎಸ್. ಧೋನಿ ನಾಯಕತ್ವ ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದರು. ಸ್ವತಃ ಧೋನಿಯೇ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. Can’t wait for the new season and the new ‘role’. Stay tuned!. ‘ಹೊಸ ಸೀಸನ್​ನಲ್ಲಿ, ಹೊಸ ರೋಲ್​ನಲ್ಲಿ ಕಾಣಿಸಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಧೋನಿ ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಹೊಸ ರೋಲ್​ನಲ್ಲಿ ಧೋನಿ

ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ಐಪಿಎಲ್ 17ನೇ ಸೀಸನ್‌ ನಾಳೆಯಿಂದ (ಮಾರ್ಚ್ 22) ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ಸೆಣಸಾಡಲಿದೆ. ಈ ಪಂದ್ಯದಲ್ಲಿ ಧೋನಿ ಹೊಸ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧೋನಿ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್

  • 2010 ರಲ್ಲಿ ಚಾಂಪಿಯನ್
  • 2011 ರಲ್ಲಿ ಚಾಂಪಿಯನ್
  • 2018 ರಲ್ಲಿ ಚಾಂಪಿಯನ್ಸ್
  • 2021 ರಲ್ಲಿ ಚಾಂಪಿಯನ್ಸ್
  • 2023 ರಲ್ಲಿ ಚಾಂಪಿಯನ್ಸ್

RELATED ARTICLES

Related Articles

TRENDING ARTICLES