Sunday, May 5, 2024

ಶಿಕಾರಿಪುರದಲ್ಲೇ ಹೆಚ್ಚು ಲೀಡ್ ಪಡೆಯುತ್ತೇನೆ : BSYಗೆ ಈಶ್ವರಪ್ಪ ಸವಾಲ್

ಶಿವಮೊಗ್ಗ : ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡ್ತೇನೆ ಎಂದು ಯಡಿಯೂರಪ್ಪ ವಿರುದ್ಧ ಮತ್ತೆ ಮಾಜಿ ಡಿಸಿಎಂ ಹಾಗೂ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದಲ್ಲಿ ಹೆಚ್ಚು ಲೀಡ್ ಪಡೆಯುತ್ತೇನೆ. ಇತರೆ ಕಡೆಗಳಲ್ಲಿ ಲೀಡ್ ಪಡೆಯಲು ಶ್ರಮಿಸುತ್ತೇನೆ ಎಂದರು.

ಪಕ್ಷ ಶುದ್ದೀಕರಣ ಮಾಡಬೇಕು ಎಂಬ ಸದಾನಂದಗೌಡ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಪಕ್ಷವನ್ನು ಅಪ್ಪ ಮಕ್ಕಳ ಹಿಡಿತದಿಂದ ತಪ್ಪಿಸಬೇಕಿದೆ. ಯಡಿಯೂರಪ್ಪ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು. ವಿಜಯೇಂದ್ರ ಶಾಸಕರು ಹಾಗೂ ರಾಜ್ಯಾಧ್ಯಕ್ಷರು. ರಾಘವೇಂದ್ರ ಅವರು ಸಂಸದರಾಗಿದ್ದಾರೆ. ರಾಜ್ಯದಲ್ಲಿ ಇವರ ಹಿಡಿತದಿಂದ ಪಕ್ಷವನ್ನು ತಪ್ಪಿಸಬೇಕಿದೆ ಎಂದು ವಾಗ್ದಾಳಿ ನಡೆಸಿದರು.

ಅಪ್ಪ ಮಕ್ಕಳು ಹಣ ಖರ್ಚು ಮಾಡಿದ್ರು

ಶಿಕಾರಿಪುರದಲ್ಲಿ ಅಪ್ಪ ಮಕ್ಕಳು ಹಣ ಖರ್ಚು ಮಾಡಿದ್ರು. ಜಾತಿ ಲಾಬಿ ಮಾಡಿದ್ರೂ 11 ಸಾವಿರ ಲೀಡ್ ಮಾತ್ರ ಸಿಕ್ತು. ಇದು ಈ ಚುನಾವಣೆಯಲ್ಲಿ ನಡೆಯಲ್ಲ ಅಂತ ಕಾರ್ಯಕರ್ತರು ಹೇಳ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ವಿಜಯೇಂದ್ರ‌ ಬದಲಾವಣೆ ಆಗ್ತಾರೆ. ನನ್ನ ನಿವಾಸದಲ್ಲೇ ಇದೇ ಮಾರ್ಚ್ 28ರಂದು ಚುನಾವಣಾ ಕಾರ್ಯಾಲಯ ಉದ್ಘಾಟನೆ ಆಗುತ್ತದೆ. ಕೆಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ, ಪ್ರಮುಖರು ಬರುವ ನಿರೀಕ್ಷೆ ಇದೆ. ಪ್ರಮುಖರು ಬರದಿದ್ದರೆ ಮಹಿಳೆಯರಿಂದ ಉದ್ಘಾಟನೆ ಮಾಡಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.

RELATED ARTICLES

Related Articles

TRENDING ARTICLES