Sunday, May 5, 2024

ಗೀತಕ್ಕ ಗೆದ್ರೆ.. ಐದು ವರ್ಷ ಇಲ್ಲೇ ಇರ್ತಾರೆ : ಮಧು ಬಂಗಾರಪ್ಪ

ಶಿವಮೊಗ್ಗ : ನಿಮ್ಮ ಆಶೀರ್ವಾದದಿಂದ ಗೀತಾ ಶಿವರಾಜ್​ಕುಮಾರ್ ಅವರನ್ನು ಗೆಲ್ಲಿಸಿ. ಗೀತಕ್ಕ ಗೆದ್ರೆ, ಐದು ವರ್ಷ ಇಲ್ಲೇ ಇರ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಧಾನಿ ಮೋದಿ ಹೆಸರಿನಲ್ಲಿ ಗೆದ್ದಿದ್ದಾರೆ ಎಂದು ಕುಟುಕಿದರು.

ನಮ್ಮ ತಂದೆ ಎಸ್. ಬಂಗಾರಪ್ಪ ಅವರ ಧ್ವನಿಯಾಗಿ, ಜನರ ಪರವಾಗಿ ಗೀತಾಕ್ಕ ಕೆಲಸ ಮಾಡುತ್ತಾರೆ. ಒಳ್ಳೆಯ ಸಂಸದರಾಗಿ ಗೀತಾಕ್ಕ ಕೆಲಸ ಮಾಡ್ತಾರೆ. ನಿಮ್ಮ ಧ್ವನಿಯಾಗಿ, ಪ್ರಾಮಾಣಿಕವಾಗಿ ಅವರು ಇರ್ತಾರೆ. ಬಂಗಾರಪ್ಪ ಧ್ವನಿಯಾಗಿ ಗೀತಾಕ್ಕೆ ನಿಮ್ಮ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಒಮ್ಮೆ ಸೋತು ರಾಜಕೀಯ ಮಾಡಬೇಕು

ನಮ್ಮ ತಂದೆ ಮಹಾನ್ ವ್ಯಕ್ತಿ. ನಮ್ಮ ತಂದೆ ಅವರು ಹೇಳಿದ್ರು, ನಾವು ಒಂದು ಸಲ ಸೋತು ರಾಜಕೀಯ ಮಾಡಬೇಕು ಅಂತ. ಶಿವಮೊಗ್ಗದ ಧ್ವನಿಯಾಗಿ ಪಾರ್ಲಿಮೆಂಟ್​ನಲ್ಲಿ ಗೀತಾಕ್ಕ ನಿಲ್ತಾರೆ. ಇದೇ ಶರಾವತಿ ಡಾಂಗೆ ರೈತರು ಬಿಟ್ಟುಕೊಟ್ಟಿದ್ರಿಂದ ನರೇಂದ್ರ ಮೋದಿಯವರ ಧ್ವನಿ ಕೇಳಿಸಿರೋದು. ಶರಾವತಿ ಸಂತ್ರಸ್ತರ ಪರ ಪ್ರಧಾನಿ ಮೋದಿ ಮಾತಾನಾಡಬೇಕಿತ್ತು ಎಂದು ಮಧು ಬಂಗಾರಪ್ಪ ಚಾಟಿ ಬೀಸಿದರು.

ಮೋಸುಂಬೆ ಹಾರ ಹಾಕಿ ಸ್ವಾಗತ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಶಿವಮೊಗ್ಗಕ್ಕೆ ಆಗಮಿಸಿದರು. ನಗರದ ಹೊಳೆ ಬಸ್ ಸ್ಟಾಪ್ ಬಳಿ ಬೆಕ್ಕಿನ ಕಲ್ಮಠ ಮುಂಭಾಗದಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು. ಬೃಹದಾಕಾರದ ಮೋಸುಂಬೆ ಹಣ್ಣಿನ ಹಾರ, ಮಂಗಳವಾದ್ಯಗಳ ಮೂಲಕ ಅಭಿಮಾನಿಗಳು ಬರಮಾಡಿಕೊಂಡರು. ಲಂಬಾಣಿ ಜನಾಂಗದವರು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಸ್ವಾಗತ ಕೋರಿದರು.

RELATED ARTICLES

Related Articles

TRENDING ARTICLES