Thursday, May 9, 2024

ಸಮಾಧಾನ ಆಗಿದೆ, ಯೋಗ್ಯವಾದ ನಿರ್ಧಾರ ಆಗುತ್ತೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಸಮಾಧಾನ ಆಗಿದೆ, ಯೋಗ್ಯವಾದ ನಿರ್ಧಾರ ಆಗುತ್ತದೆ ಎಂದು ಬೆಳಗಾವಿ ಟಿಕೆಟ್ ಸಿಗುವ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಬಳಿಕ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು ಎಂದು ಹೇಳಿದರು.

ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಬೆಳಗಾವಿ ಜಿಲ್ಲೆಯ‌ ನಾಯಕರ ಜೊತೆ ಸಮಾಲೋಚನೆ ಮಾಡಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳೋ ಕೆಲಸ ಆಗಿದೆ. ಚುನಾವಣಾ ಸಭೆ ಮುಗಿಸಿ ಅಂತಿಮ ತೀರ್ಮಾನ ಆಗುತ್ತೆ. ಮೋದಿ ಸಭೆ ಕರೆದು ಅಂತಿಮ‌ ತೀರ್ಮಾನ ಆಗುತ್ತದೆ ಎಂದು ತಿಳಿಸಿದರು.

ಎಲ್ಲರ ಸಹಕಾರದೊಂದಿಗೆ ಚುನಾವಣೆ ಎದುರಿಸುತ್ತೇವೆ

ಟಿಕೆಟ್ ತಪ್ಪಿಸೋ ವಿಚಾರ ನಾನು ಕಾಮೆಂಟ್ ಮಾಡಲ್ಲ. ಪಕ್ಷದ ತೀರ್ಮಾನ ಆದ ಮೇಲೆ ಎಲ್ಲರಿಗೂ ಗೊತ್ತಾಗತ್ತದೆ. ಎಲ್ಲರ ಸಹಕಾರದೊಂದಿಗೆ ಚುನಾವಣೆ ಎದುರಿಸುತ್ತೇವೆ. ಇವತ್ತು ಮಧ್ಯಾಹ್ನ ಕಡಾಡಿ, ಕೋರೆ, ಅಭಯ್ ಪಾಟೀಲ್ ಎಲ್ಲರ ಜೊತೆ ಮಾತನಾಡಿದ್ದೀನಿ. ಪಕ್ಷದ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ ಎಂದು ಹೇಳಿದರು.

ಟಿಕೆಟ್ ಘೋಷಣೆ ಆಗೋವರೆಗೂ ಹೇಳೋಕೆ ಬರಲ್ಲ

ಟಿಕೆಟ್ ಸಿಗುವ ವಿಶ್ವಾಸ ಇದೆ. ಟಿಕೆಟ್ ಘೋಷಣೆ ಆಗೋವರೆಗೂ ನಾವ ಏನು‌ ಹೇಳೋಕೆ ಬರಲ್ಲ. ಆದ್ರೆ, ಟಿಕೆಟ್ ಸಿಗೋ ವಿಶ್ವಾಸ ಇದೆ. ಕೆಲ ಕಡೆ ಟಿಕೆಟ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದ ಜಗದೀಶ್ ಶೆಟ್ಟರ್, ಮೊದಲಿನಷ್ಟು ನಿಖರವಾಗಿ ಏನನ್ನು ಹೇಳಲಿಲ್ಲ.

RELATED ARTICLES

Related Articles

TRENDING ARTICLES