ಹುಬ್ಬಳ್ಳಿ : ನಾಳೆ ನನ್ನ ಹೆಸರು ಅಧಿಕೃತ ಘೋಷಣೆ ಆಗಬಹುದು. ಬಿಜೆಪಿಯ ಮೂರನೇ ಲಿಸ್ಟ್ ನಾಳೆ ಘೋಷಣೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಮತವಿಲ್ಲ. ನಾನು ಸ್ಪರ್ಧೆ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ. ನಾನು ಪ್ರಭಾಕರ ಅವರ ಜೊತೆ ಮಾತಾಡಿದ್ದೇನೆ ಎಂದರು.
ಪ್ರಭಾಕರ ಕೋರೆ ಅವರ ಮನೆಯಲ್ಲಿ ಮೀಟಿಂಗ್ ಮಾಡಿರೋ ವಿಚಾರವಾಗಿ ಮಾತನಾಡಿ, ಮನೆಗೆ ಬಂದ್ರೆ ಬೇಡಾ ಅನ್ನೋಕೆ ಆಗತ್ತಾ? ಪ್ರಭಾಕರ ಕೋರೆ ಅವರು ನೇರವಾಗಿ ಎಲ್ಲೂ ಮಾತಾಡಿಲ್ಲ. ಅಲ್ಲಿ ಏಳೆಂಟು ಜನ ಹೋಗಿದ್ದಾರೆ. 17 ಲಕ್ಷ ಮತದಾರರಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ನನ್ಗೆ ಮೊದಲಿನಿಂದಲೂ ಟಚ್ ಇದೆ
ನಾನು ಮೂರು ದಿನಗಳಿಂದ ಎಲ್ಲರ ಜೊತೆ ಮಾತಾಡಿದ್ದೇನೆ. ಹಿರಿಯರು, ಕಿರಿಯರು, ರಾಜಕೀಯ ಹೊರತುಪಡಿಸಿ ನಾಯಕರ ಜೊತೆ ಮಾತಾಡಿದ್ದೇನೆ. ಬೆಳಗಾವಿ ನಮಗೆ ಮೊದಲಿನಿಂದಲೂ ಟಚ್ ಇದೆ. ವಿರೋಧ ಪಕ್ಷದ ನಾಯಕನಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದ್ದೇನೆ. ಯಾವ ಭಿನ್ನಮತ ಇಲ್ಲ ಏನಿಲ್ಲ. ಯಾರೂ ನೇರವಾಗಿ ಮಾತಾಡಿಲ್ಲ. ಯಾರಾದರೂ ನೇರವಾಗಿ ಮಾತಾಡಿದ್ರೆ ನಾನು ಅದಕ್ಕೆ ರಿಯಾಕ್ಟ್ ಮಾಡಬಹುದು. ಯಾರೂ ಮಾತಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.