Sunday, April 28, 2024

ಅಯ್ಯೋ ಅದು ತಗಡು, ಸಚಿವ ಚಲುವರಾಯಸ್ವಾಮಿ ತಗಡು ಎಂದ ಸುರೇಶ್ ಗೌಡ

ಮಂಡ್ಯ : ‘ಅಯ್ಯೋ, ಅದು ತಗಡು’ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಗಡು ಎಂದು ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಮಾತನಾಡಿರುವ ಅವರು, ಮಂಡ್ಯದಲ್ಲಿ ಯಾವನೋ ಒಬ್ಬ ತಗಡುನ ಮಂತ್ರಿ ಮಾಡಿಬಿಟ್ಟು ಬೇಡಾ ಕಣಯ್ಯ ಕಾಟ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಒಂದು ಸ್ಪಷ್ಟ ಉತ್ತರವನ್ನು ಮಂಡ್ಯ ಜನತೆಗೆ ಕೊಟ್ಟಿದ್ದಾರೆ‌. ನಿಮ್ಮ ಆಸೆಗೆ ನಿರಾಸೆ ಬಾರದ ರೀತಿಯಲ್ಲಿ ತೀರ್ಮಾನ ಅಂತ ಹೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಮಾರಸ್ವಾಮಿ ಅಥವಾ ಕಳೆದ ಬಾರಿ ಮೋಸದಿಂದ ಅನ್ಯಾಯವಾಗಿ ಸೋತ ನಿಖಿಲ್ ಅಭ್ಯರ್ಥಿ ಆಗಬೇಕು ಅಂತ ಮತದಾರರ ಆಸೆ ಎಂದು ಹೇಳಿದರು.

ದುರಾಂಕಾರ ರೀತಿ ಮಾತನಾಡಿಸ್ತಿದೆ

ಹೊಟ್ಟೆಪಾಡಿಗೆ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೋಗಿದ್ದಾರೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಅಯ್ಯೋ ಅದು ತಗಡು. ಯಾರ್ಯಾರು ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿ ಬಂದ್ರು, ಏನೇನು ಮಾಡಿದ್ರು ಅನ್ನೋದು ತೆರೆದಿಟ್ಟ ಪುಸ್ತಕ. ಒಬ್ಬ ತಗಡುನ ಮಂತ್ರಿ ಮಾಡಿದ್ದೇವೆ. ದುರಾಂಕಾರ ಆತನ ಕೈಯಲ್ಲಿ ಮಾತನಾಡಿಸ್ತಿದೆ ಎಂದು ಹರಿಹಾಯ್ದರು.

ದುಡ್ಡಿರುವವರೆಲ್ಲ ಅವ್ರ ಬಳಿ ಹೋಗ್ತಾರೆ

ದುಡ್ಡು ಇರುವವರೆಲ್ಲ ಆತನ ಹತ್ರ ಹೋಗ್ತಾರೆ. ಅದೇ ಅವನ ಅದೃಷ್ಟ. ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಕುಳ ಅಲ್ಲ. ಕೆರೆ ನೀರೆಲ್ಲ ನದಿಗೆ ಹೋಗುತ್ತೆ, ನದಿ ನೀರೆಲ್ಲ ಸಮುದ್ರಕ್ಕೆ ಹೋಗುತ್ತೆ. ದುಡ್ಡಿರುವವರೆಲ್ಲ ಅವರ ಬಳಿ ಹೋಗ್ತಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿಗೆ ಅಪರೇಷನ್ ಇದೆ

ಕುಮಾರಸ್ವಾಮಿ ಅವರಿಗೆ ಅಪರೇಷನ್ ಇದೆ, ಮುಗಿಸಿ ಅಭ್ಯರ್ಥಿ ಘೋಷಣೆ ಮಾಡುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಪರ ಕುಮಾರಣ್ಣ ಇದ್ದಾರೆ. ಅವರ ಆಸೆಗೆ ನಿರಾಸೆ ಮಾಡಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು.

RELATED ARTICLES

Related Articles

TRENDING ARTICLES