Thursday, May 9, 2024

ಆಗಂತುಕರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ : ಶಾಸಕ ಯತ್ನಾಳ್

ವಿಜಯಪುರ : ಕಾನೂನು ಸುವ್ಯವಸ್ಥೆ ಹದಗೆಡಿಸುವ ಆಗಂತುಕರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆಯನ್ನು ಶಾಸಕ ಯತ್ನಾಳ್ ಖಂಡಿಸಿದ್ದಾರೆ.

ಪೊಲೀಸರ ಭಯವೇ ಇಲ್ಲದೆ ಹಾಡಹಗಲೇ ದುಷ್ಕರ್ಮಿಗಳು ಬೆಂಗಳೂರಿನ ದೇವಿ ನಗರದ ಆಭರಣ ಮಳಿಗೆಗೆ ಬಂದು ನಾಲಕ್ಕು ಸುತ್ತು ಗುಂಡು ಹಾರಿಸಿ ಹೋಗಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಇನ್ನೆಷ್ಟರ ಮಟ್ಟಿಗೆ ಕುಸಿದಿದೆ ಎಂದು ಗೊತ್ತಾಗುತ್ತದೆ. ರಾಮೇಶ್ವರಂ ಹೋಟೆಲ್​ನಲ್ಲಿ ಬಾಂಬ್ ಇಟ್ಟ ಕೆಲವೇ ವಾರಗಳಲ್ಲಿ ಶೂಟ್ ಔಟ್ ಆಗಿರೋದು ದುರದೃಷ್ಟಕರ ಎಂದು ಬೇಸರಿಸಿದ್ದಾರೆ.

ಬೆಂಗಳೂರು ಅಪರಾಧಿಗಳಿಗೆ ‘ಪ್ರಯೋಗಾಲಯ’

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ತಮ್ಮ ನಿರ್ಲಿಪ್ತ ವರ್ತನೆಯನ್ನು ಬಿಟ್ಟು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಭದ್ರಪಡಿಸಲಿ. ದುಷ್ಕರ್ಮಿಗಳು, ಕಾನೂನು ಪಾಲನೆ ಮಾಡದವರು, ಅವರಿಗೆ ಆಶ್ರಯ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿ. ಬೆಂಗಳೂರು ಅಪರಾಧಿಗಳಿಗೆ ‘ಪ್ರಯೋಗಾಲಯ’ ಆಗದಿರಲಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES