Sunday, May 5, 2024

ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗವ್ರೆ : ಚಲುವರಾಯಸ್ವಾಮಿ ಲೇವಡಿ

ಮಂಡ್ಯ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ, ಜೆಡಿಎಸ್ ಪಕ್ಷದ ಅಸ್ತಿತ್ವಕ್ಕಾಗಿ ಬಿಜೆಪಿ ಪಕ್ಷಕ್ಕೆ ಹೋಗವ್ರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಸೆಕ್ಯುಲರ್ ಪಕ್ಷ, ಜಾತ್ಯತೀತ ಅಂತ ಹೇಳ್ತಿದ್ರು. ಅದೇನಾಯ್ತು ಇವಾಗ..? ಪಾಪ.. ಈಗ ಕೋಮುವಾದಿ ಪಕ್ಷದ ಜೊತೆ ಅವ್ರು ಸೇರಿಕೊಂಡವ್ರೆ. ಕುಮಾರಸ್ವಾಮಿ ಹೊಟ್ಟೆ ಪಾಡಿಗೋಸ್ಕರ ಆ ಪಕ್ಷಕ್ಕೆ ಹೋಗವ್ರೆ ಎಂದು ವ್ಯಂಗ್ಯವಾಡಿದ್ದಾರೆ .

ಈ ಮೊದಲು ದೇವೇಗೌಡ ಅವರು ನರೇಂದ್ರ ಮೋದಿ ಪ್ರಧಾನಿ ಆದ್ರೆ, ದೇಶ ಬಿಟ್ಟುಹೋಗ್ತೀನಿ ಅಂದಿದ್ರು. ಹೋದ್ರಾ? ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಬೇಕು ಅಂತಿದ್ರು, ಏನಾಯ್ತು ಅವೆಲ್ಲ..? ಪಾಪ.. ಕುಮಾರಸ್ವಾಮಿ ಅದೆಷ್ಟು ಸಾರಿ ಬಿಜೆಪಿ, RSS ಭಜರಂಗದಳಕ್ಕೆ ಬಯ್ತಿದ್ರು. ಈಗ ಹೊಟ್ಟೆಪಾಡಿಗಾಗಿ ಅವರ ಜೊತೆ ಕೈ ಜೋಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ವೋಟು ಹಾಕದಿದ್ರೆ ಅಭಿವೃದ್ಧಿ ನಿಲ್ಲಲಿದೆ

ಇದೇ ವೇಳೆ ಗ್ರಾಮದಲ್ಲಿನ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಜನರು ಸಚಿವರಿಗೆ ಕೇಳಿದ್ದಾರೆ. ಅಭಿವೃದ್ಧಿ ಕೆಲಸ ಆಗಬೇಕು ಅಂದ್ರೆ ನಮ್ಮ ಕಾಂಗ್ರೆಸ್​ ಅಭ್ಯರ್ಥಿಗೆ ಮೊದಲು ವೋಟು ಹಾಕಿ ಎಂದು ಹೇಳಿದ್ದಾರೆ. ವೋಟು ಹಾಕಿ ನೂತನ ರಸ್ತೆಗಳನ್ನು ಮಾಡುತ್ತೇವೆ. ಮೊದಲು ಮತ ಹಾಕಿ, ಇಲ್ಲದಿದ್ದರೆ ಅಭಿವೃದ್ಧಿ ನಿಲ್ಲಲಿದೆ ಎಂದು ನಗು ನಗುತ್ತಲೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES