Sunday, May 5, 2024

ನನ್ನ ಸೊಸೆಯನ್ನು ದೇವಸ್ಥಾನ ಬಿಟ್ಟರೆ ಹೊರಗೆ ಕಳಿಸಲ್ಲ : ಈಶ್ವರಪ್ಪ

ಶಿವಮೊಗ್ಗ : ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಮ್ಮ ಸೊಸೆಗೆ ಟಿಕೆಟ್ ಕೊಡುತ್ತೇವೆ ಅಂದ್ರಿದ್ರು. ನಾನು ನನ್ನ ಸೋಸೆಯನ್ನು ದೇವಸ್ಥಾನ ಬಿಟ್ಟರೆ ಹೊರಗೆ ಕಳಿಸಲ್ಲ ಅಂದಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಿ ಹಾವೇರಿಗೆ ಹೋಗಿಲ್ಲ. ಶಿವಮೊಗ್ಗ ವಿಧಾನಸಭಾ ಟಿಕೆಟ್ ಅನ್ನು ನನ್ನ ಮಗನಿಗೆ ಕೇಳಿದಾಗ ಅವರು ಈ ರೀತಿ ಹೇಳಿದ್ದರು ಎಂದು ತಿಳಿಸಿದರು.

ಹಾವೇರಿ ಚುನಾವಣೆ ಹೋಗುವ ಮುಂಚೆ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ. ಆಗ ಯಡಿಯೂರಪ್ಪನವರು ಟಿಕೆಟ್ ಕೊಡುತ್ತೇನೆ. ನಾನು ಸಹ ಓಡಾಡುತ್ತೇನೆ ಎಂದಿದ್ರು. ಈಗಲೂ ನನಗೆ ನಂಬಿಕೆ ಇದೆ, ಟಿಕೆಟ್ ಸಿಗುತ್ತೆ ಅಂತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ

ನಾನು ಸುದ್ದಿಗೋಷ್ಠಿ ಕರೆಯುತ್ತಿದಂತೆ ವರಿಷ್ಠರಿಗೂ ಕೂತುಹಲ ಆಗಿದೆ. ನಾನು ಏನಾದರೂ ಹೇಳಿ ಬೀಡಬಹುದು ಅಂತ. ನನ್ನ ಅಭಿಮಾನಿ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂದಿದ್ದಾರೆ. ಇಡೀ ಜಿಲ್ಲೆಯ ಹಿತೈಷಿಗಳ ಜೊತೆ ಚೆರ್ಚೆ ಮಾಡಿ ತೀರ್ಮಾನ ತಿಳಿಸುತ್ತೇನೆ ಎಂದು ತಮ್ಮ ಮುಂದಿನ ನಡೆ ಬಗ್ಗೆ ಈಶ್ವರಪ್ಪ ಪ್ರಕಟಿಸಿದರು.

RELATED ARTICLES

Related Articles

TRENDING ARTICLES