Wednesday, May 22, 2024

ಯತ್ನಾಳ ನಮಗಿಂತ ಸ್ವಪಕ್ಷಿಯರ ಮೇಲೆಯೇ ಹೆಚ್ಚು ಬಾಂಬ್ ಸಿಡಿಸುತ್ತಾರೆ: ಸಚಿವ ಎಂ.ಸಿ ಸುಧಾಕರ್

ವಿಜಯಪುರ: ಯತ್ನಾಳ ಅವರು ನಮಗಿಂತ ಸ್ವಪಕ್ಷಿಯರ ಮೇಲೆಯೇ ಹೆಚ್ಚು ಬಾಂಬ್ ಹಾಕುತ್ತಾರೆ ಅದು ಸರ್ವೇ ಸಾಮಾನ್ಯ ಎಂದು ಸಚಿವ ಎಂ.ಸಿ ಸುಧಾಕರ್​ ಕುಟುಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಸಾಹೇಬರು ನನಗೆ ಆತ್ಮೀಯರು, ಯತ್ನಾಳ ಅವಾಗವಾಗ ಇಂತಹ ಬಾಂಬ್ ಸಿಡಿಸುತ್ತಾರೆ. ಹಾಗಾಗಿ ಯತ್ನಾಳ ಅವರ‌ ಪಕ್ಷದವರೇ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸುಧಾಕರ್ ಯತ್ನಾಳ್​ಗೆ ತೀರುಗೇಟು ನೀಡಿದ್ದಾರೆ.

ಇದನ್ನೂ ಓದಿ: ವೃದ್ಧ ಮಾವನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಸೊಸೆ

ಯತ್ನಾಳ್ ಹಾಗೂ ನನ್ನದು ವೈಯಕ್ತಿಕ ದೋಸ್ತಿ ಇದೆ ರಾಜಕೀಯ ಸಿದ್ದಾಂತ ಮತ್ತೊಂದು ಬೇರೆ ಇದೆ ಎಂದರು.

ಪ್ರತಿಯೊಬ್ಬರಿಗೂ ಸಿಎಂ ಆಗುವ ಅವಕಾಶ ಅರ್ಹತೆ ಇದೆ. ಈಗ ಸದ್ಯಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಮೊತ್ತದ ಗ್ಯಾರಂಟಿಗಳ ನಡುವೆ ಸರ್ಕಾರ ನಡೆಸುವುದು ಸುಲಭದ ಮಾತಲ್ಲ. ಸಂಪನ್ಮೂಲಗಳನ್ನ ಯಾವ ಯಾವ ರೂಪದಲ್ಲಿ ಶೇಖರಣೆ ಮಾಡಬೇಕೆಂಬುದನ್ನಾ ಸಾಬೀತು ಮಾಡುತಿದ್ದಾರೆ.

15 ಬಜೆಟ್ ಗಳನ್ನ ಮಂಡನೆ ಮಾಡಿದ ಅನುಭವಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ಸುಭದ್ರವಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಸರ್ಕರ ಬೀಳುತ್ತದೆ ಎಂಬ ಯತ್ನಾಳ್​ ಹೇಳಿಕೆಗೆ ತಿರುಗುಬಾಣ ಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES