ಶಿವಮೊಗ್ಗ : ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ. ಆ ಹುಚ್ಚನ ಬಗ್ಗೆ ನೀವು ಪ್ರಶ್ನೆ ಕೇಳಬೇಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ನೀಡಿರುವ ಸಂವಿಧಾನ ಬದಲಾವಣೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ನಾವು ಗ್ಯಾರಂಟಿ ಯೋಜನೆಗಳನ್ನಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ನಮಗೆ ಪ್ಲಸ್ ಆಗಲಿವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕೆ ಬಹಳಷ್ಟು ಕೇಳಿ ಬಂದಿತ್ತು. ನಮ್ಮ ಗ್ಯಾರಂಟಿ ವಿರೋಧಿಸಿದರು. ಆದರೆ, ಈಗ ಅವರೇ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಅವರ ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಲ್ವಾ..? ಎಂದು ಕುಟುಕಿದರು.
ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಕಿಡಿ
ಶರಾವತಿ ಮುಳುಗಡೆ ಸಂತ್ರಸ್ತರ ಸಹಾಯಕ್ಕೆ ಇವರು ಬರಲಿಲ್ಲ. ಈ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ದನಿ ಎತ್ತಿಲ್ಲ. ಕೇವಲ ಏರ್ಪೋರ್ಟ್, ರಾಷ್ಟ್ರೀಯ ಹೆದ್ದಾರಿ, ಡಿಜಿಟಲ್ ಬ್ಯಾನರ್ ಹೀಗೆ ಬಡ ಜನರಿಗೆ ವಿರೋಧವಾಗಿರುವುದೇ ಮಾತನಾಡುತ್ತಾರೆ. ಬಡ ಜನರಿಗೆ ಅಗತ್ಯವಾಗಿರುವ ಯೋಜನೆಗಳು ನಾವು ಜಾರಿಗೆ ತಂದಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.