Thursday, May 9, 2024

ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಆಗ್ತಾರೆ : ಸ್ವಾಮೀಜಿ ಭವಿಷ್ಯವಾಣಿ

ವಿಜಯಪುರ : ಮುಂಬರುವ ದಿನಗಳಲ್ಲಿ ಸಚಿವ ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಆಗ್ತಾರೆ ಎಂದು ವೀರಶೈವ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಎಂ.ಬಿ. ಪಾಟೀಲ್​ರಿಗೆ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.

ಎಂ.ಬಿ. ಪಾಟೀಲ್ ಸಾಮಾನ್ಯ ಮಂತ್ರಿ ಆಗಿದ್ದಾರೆ. ಗುರುಪಾದೇಶ್ವರ ಮಠದ ಆಶೀರ್ವಾದ ಅವಶ್ಯವಾಗಿ ಎಂಬಿಪಿ ಮೇಲೆ ಇದೆ‌. ಮುಂಬರುವ ದಿನಗಳಲ್ಲಿ ಎಂ.ಬಿ. ಪಾಟೀಲ್ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಸ್ವಾಮೀಜಿ ಹಾರೈಸಿದರು.

ಬಿಜಾಪುರ ಬರಗಾಲ ಬೀಡು ಎನಿಸಿಕೊಂಡಿತ್ತು. ಅದನ್ನ ಅಳಿಸಿ ಹಾಕಲು ನೀರಾವರಿ ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸಿ, ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಎಂ.ಬಿ. ಪಾಟೀಲ್ ರೈತರ ಜೀವನವನ್ನು ಬಂಗಾರ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಆಗಿದೆ

ಎಂ.ಬಿ ಪಾಟೀಲ್ ಅವರಿಗೆ ನಮ್ಮ ಆಶೀರ್ವಾದ, ಸಿದ್ದೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಆಗಿದೆ. ಜಿಲ್ಲೆಯ ಜನರ, ಮಹಿಳೆಯರ ಆಶೀರ್ವಾದವೂ ಇದೆ ಎಂದು ನುಡಿದರು. ಇದೇ ವೇಳೆ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಭವಿಷ್ಯವಾಣಿ ಆಲಿಸಿದ ಸಚಿವ ಎಂ.ಬಿ ಪಾಟೀಲ್, ಶ್ರೀಗಳಿಗೆ ಕೈ ಮುಗಿದು ನಮಿಸಿದರು.

RELATED ARTICLES

Related Articles

TRENDING ARTICLES