ರಾಯಚೂರು : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಹಿತಿ ಡಾ.ಕುಂ ವೀರಭದ್ರಪ್ಪ ಹಾಡಿ ಹೊಗಳಿದ್ದಾರೆ.
ರಾಯಚೂರಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ರೀ ಬಸ್ ಕೊಟ್ರು.. ಹೆಂಗಸ್ರು ಮೈ ಚಳಿ ಬಿಟ್ಟು ಮನೆಯಿಂದ ಹೊರಬಂದ್ರು ಎಂದು ಹೇಳಿದ್ದಾರೆ.
ಉಚಿತ ಗ್ಯಾರಂಟಿ ಯೋಜನೆಗಳಿಂದ ದೇಶ ಹಾಳುತ್ತದೆ ಅಂತಾರೆ. ಮನೆಯೊಳಗೆ ಬಂಧಿಯಾಗಿ ಇರುವವರನ್ನು ಫ್ರೀ ಬಸ್ ಅಂತೇಳಿ ಕಾಂಗ್ರೆಸ್ ಸರ್ಕಾರ ಬಿಟ್ಟಿತು. ಎಲ್ಲಿವರೆಗೆ ಮಹಿಳೆಯರನ್ನು ಮನೆಯಲ್ಲೇ ಇಟ್ಟಿರುತ್ತೀರಿ. ಫ್ರೀ ಬಸ್.. ನೀವು ಎಲ್ಲಿಯಾದರೂ ಓಡಾಡಿ ಅಂತು ಸರ್ಕಾರ. ಆಗ ಮೈಚಳಿ ಬಿಟ್ಟು ಮನೆಯಿಂದ ಮಹಿಳೆಯರು ಹೊರಬಂದ್ರು. ಅದು ನಿಜವಾದ ಮಹಿಳಾ ದಿನಾಚರಣೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅನಿಸುತ್ತದೆ ಅಂದ್ರೆ
ಮಳೆ ಬಂದಿಲ್ಲ ಅಂದ್ರೂ ಫ್ರೀ ಅನ್ನ, ಊಟ
ಜಾತ್ರೆಯಲ್ಲಿ ಎಲ್ಲಿ ನೋಡಿದ್ರು ಮಹಿಳೆಯರು. ಯಾಕೆಂದರೆ ಅದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಮಳೆ ಬಂದಿಲ್ಲ ಅಂದರೂ ಫ್ರೀ ಅನ್ನ, ಊಟ ಸಿಗುತ್ತಲ್ಲಾ.. ಇವೆಲ್ಲ ನಾವು ಬಹಳ ಹೆಮ್ಮೆಪಡುವಂತವುಗಳು ಎಂದು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.