Thursday, May 9, 2024

‘ಅತಿ ವೇಗ, ತಿಥಿ ಬೇಗ’ : ಸ್ಪೀಡಾಗಿ ಬಂದ, ಕಾರಿಗೆ ಗುದ್ದಿದ, ಮಸಣ ಸೇರಿದ!

ಉಡುಪಿ : ಅತಿ ವೇಗ, ತಿಥಿ ಬೇಗ..! ಈ ಗಾದೆ ಮಾತು ಅಕ್ಷರಶಃ ಸತ್ಯ. ಇದಕ್ಕೆ ಉಡುಪಿಯಲ್ಲಿ ನಡೆದಿರುವ ಈ ಅಪಘಾತವೇ ಪ್ರತ್ಯಕ್ಷ ಸಾಕ್ಷಿ.

ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಉಡುಪಿ ನಿಟ್ಟೂರಿನ ಕಾಂಚನಾ ಹುಂಡೈ ಕಾರ್ ಶೋ ರೂಂ ಬಳಿ ನಡೆದಿದೆ.

ಮೃತ ಸವಾರನನ್ನು ಸ್ವಸ್ತಿಕ್(21) ಎಂದು ಗುರುತಿಸಲಾಗಿದೆ. ಈ ಯವಕ ಇಂದು ಮುಂಜಾನೆ ತನ್ನ ಬೈಕ್ ನಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸ್ವಸ್ತಿಕ್ ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೃತ ಯುವಕ ಬೈಕ್​ನಲ್ಲಿ ವೇಗವಾಗಿ ಬರುತ್ತಿದ್ದ. ಈ ವೇಳೆ ಬೈಕ್ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದೆ. ಹಾಗೆಯೇ ಮುಂದೆ ಬಂದ ಬೈಕ್ ಏಕಾಏಕಿ ಕಾರ್ ಶೋ ರೂಂ ಹೊರಗಡೆ ನಿಲ್ಲಿಸಿದ್ದ ಕಾರ್​ಗೆ ಡಿಕ್ಕಿ ಹೊಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES