ಮಂಡ್ಯ : ಲೋಕಸಭಾ ಟಿಕೆಟ್ ಘೋಷಣೆ ಆದ ಕೂಡಲೇ ಸಭೆ ಮಾಡ್ತೀನಿ. ತಾಲ್ಲೂಕುವಾರು ಪ್ರವಾಸ, ಸಭೆ ಮಾಡ್ತೀನಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಬರುವ ಡೈರೆಕ್ಷನ್ ಪಾಲಿಸಲು ನಾನು ಸಿದ್ಧ ಎಂದು ತಿಳಿಸಿದರು.
ಜೆಡಿಎಸ್ ನಾಯಕರ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ. ಅದರಲ್ಲಿ ನಾನು ಮಧ್ಯ ಪ್ರವೇಶ ಮಾಡೋದು ಸರಿಯಲ್ಲ. ಮೈತ್ರಿ ಧರ್ಮ ಪಾಲನೆಗೆ ನಿರ್ಣಯ ಸ್ವಾಗತ. ಬಿಜೆಪಿ ಪಕ್ಷದ ಡೈರೆಕ್ಷನ್ ಏನು ಅಂತ ಕಾಯ್ತಿದ್ದೀನಿ ಎಂದು ಹೇಳಿದರು.
ನಾನು ದಾಖಲೆ ಸಹಿತ ಉತ್ತರ ಹೇಳ್ತೀನಿ
ಅಂಡರ್ ಪಾಸ್ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ನಾನು ಕೆಲವೊಂದು ದಾಖಲೆ ಸಹಿತ ಉತ್ತರ ಹೇಳ್ತೀನಿ. ನಾನು ಏನು ಮಾಡಿದ್ದೀನಿ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಸುಮಲತಾ ಅವರು, ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್ಗಾಗಿ ಅಡಿಷನಲ್ ಕೆಲಸಕ್ಕಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ ಎಂದರು.
ಅವರಿಗೆ ಇದು ಗೊತ್ತಿದೆಯೋ, ಇಲ್ವೋ?
ಕೇಂದ್ರ ಸರ್ಕಾರದಲ್ಲಿ ಪ್ರೋಸೆಸ್ ಆಗಿದೆ. ಅಂತಿಮವಾಗಿ ಸಚಿವರ ಸಹಿ ಆಗಬೇಕಿದೆ, ಅದೊಂದೇ ಬಾಕಿ. ಈ ಹಂತದಲ್ಲಿ ಪ್ರತಿಭಟನೆ ಮಾಡೋದು ಎಷ್ಟು ಸರಿ? ಅವರಿಗೆ ಇದು ಗೊತ್ತಿದೆಯೋ, ಇಲ್ವೋ? ಗೊತ್ತಿದ್ದೂ ಈ ರೀತಿ ಮಾಡ್ತಿದ್ದಾರೋ ಗೊತ್ತಿಲ್ಲ. ಸುಳ್ಳು ಹೇಳಿ ಈ ರೀತಿ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ ಎಂದು ಕುಟುಕಿದರು.
ನನಗೆ ಕ್ರೆಡಿಟ್ ಬೇಡ, ಅದರ ಅವಶ್ಯಕತೆ ನನಗಿಲ್ಲ
ನನ್ನ ಹೋರಾಟದಿಂದ ಆಗಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಇರಬಹುದು. ಅರ್ಧಬಂರ್ಧ ತಿಳಿದು ಮಾತನಾಡೋದು ಸರಿಯಲ್ಲ. ನನಗೆ ಕ್ರೆಡಿಟ್ ಏನೂ ಬೇಡ. ನನಗೆ ಅದರ ಅವಶ್ಯಕತೆ ನನಗಿಲ್ಲ. ನಿತಿನ್ ಗಡ್ಕರಿ ಅವರನ್ನು ಸಾಕಷ್ಟು ಸಲ ಭೇಟಿ ಮಾಡಿ ಹಲವು ಬೇಡಿಕೆ ಇಟ್ಟಿದ್ದೆ. ಅದರ ಫಲವಾಗಿ ಅನುಮೋದನೆ ಸಿಕ್ಕಿದೆ. ಗಡ್ಕರಿ, ಬಿಜೆಪಿ ಸರ್ಕಾರ ಸಾಕಷ್ಟು ಹೆದ್ದಾರಿ ಅಭಿವೃದ್ಧಿ ಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ರಸ್ತೆ ಆಗಿದೆ. ಇದರ ಕ್ರೆಡಿಟ್ನ ಬಿಜೆಪಿಗೆ ಕೊಡಲು ಕಾಂಗ್ರೆಸ್ನವರು ಸಿದ್ಧರಿಲ್ಲ. ಹೀಗಾ,ಗಿ ಈ ರೀತಿಯ ಹೋರಾಟ ಮಾಡ್ತಿದ್ದಾರೆ ಎಂದು ಸುಮಲತಾ ಚಾಟಿ ಬೀಸಿದರು.