Sunday, May 5, 2024

ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಹಲ್ಲೆ ನಡೆಸಿದ ಪಾಪಿ!

ಮಂಡ್ಯ: ತನ್ನ ದ್ವಿಚಕ್ರ ವಾಹನಕ್ಕೆ ಸೈಕಲ್​ ಅಡ್ಡ ಬಂದಿದೆ ಎಂಬ ಕಾರಣಕ್ಕೆ ಶಾಲಾ ಬಾಲಕಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿ ದೌರ್ಜನ್ಯವೆಸಗಿರುವ ಘಟನೆ ಸುಭಾಷ್​ ನಗರದಲ್ಲಿ ನಡೆದಿದೆ.

ಮಂಡ್ಯ ನಗರದ ರಮೇಶ್​ ಹಲ್ಲೆ ನಡೆಸಿದ ವ್ಯಕ್ತಿ, ಬುಧವಾರ ಮಧ್ಯಾಹ್ನ ಸುಮಾರು 1.45 ಸಮಯದಲ್ಲಿ ಸುಭಾಷ್​ ನಗರದ 3ನೇ ಕ್ರಾಸ್​ ಬಳಿ ಶಾಲಾ ಬಾಲಕಿ ಸೈಕಲ್​ ನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ರಮೇಶ್​ ಎಂಬುವವರ ದ್ವಿಚಕ್ರ ವಾಹನಕ್ಕೆ ಸೈಕಲ್​ ಅಡ್ಡಲಾಗಿ ಬಂದಿದೆ, ಈ ಕಾರಣಕ್ಕೆ ವ್ಯಕ್ತಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: Rameshwaram Cafe: ಬಾಂಬರ್​ ತುಮಕೂರು ಮಾರ್ಗವಾಗಿ ಭಟ್ಕಳಕ್ಕೆ ತೆರಳಿರುವ ಶಂಕೆ

ಪರೀಕ್ಷೆ ಇದೆ ಬಿಡಿ ಎಂದು ಶಾಲಾ ಬಾಲಕಿ ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೆ ವ್ಯಕ್ತಿ ಬಾಲಕಿಯ ಮೂತಿ ಹಾಗು ಕೆನ್ನೆಗೆ ಬಾರಿಸಿದ್ದಾನೆ. ಘಟನೆ ಸಂಬಂಧ ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ವೀಡಿಯೋ ಚಿತ್ರೀಕರಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ವೃದ್ದನ ನಡೆಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ.

ಘಟನೆ ಸಂಬಂಧ ಮಂಡ್ಯ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.

RELATED ARTICLES

Related Articles

TRENDING ARTICLES