ಮಂಡ್ಯ: ತನ್ನ ದ್ವಿಚಕ್ರ ವಾಹನಕ್ಕೆ ಸೈಕಲ್ ಅಡ್ಡ ಬಂದಿದೆ ಎಂಬ ಕಾರಣಕ್ಕೆ ಶಾಲಾ ಬಾಲಕಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿ ದೌರ್ಜನ್ಯವೆಸಗಿರುವ ಘಟನೆ ಸುಭಾಷ್ ನಗರದಲ್ಲಿ ನಡೆದಿದೆ.
ಮಂಡ್ಯ ನಗರದ ರಮೇಶ್ ಹಲ್ಲೆ ನಡೆಸಿದ ವ್ಯಕ್ತಿ, ಬುಧವಾರ ಮಧ್ಯಾಹ್ನ ಸುಮಾರು 1.45 ಸಮಯದಲ್ಲಿ ಸುಭಾಷ್ ನಗರದ 3ನೇ ಕ್ರಾಸ್ ಬಳಿ ಶಾಲಾ ಬಾಲಕಿ ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ರಮೇಶ್ ಎಂಬುವವರ ದ್ವಿಚಕ್ರ ವಾಹನಕ್ಕೆ ಸೈಕಲ್ ಅಡ್ಡಲಾಗಿ ಬಂದಿದೆ, ಈ ಕಾರಣಕ್ಕೆ ವ್ಯಕ್ತಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: Rameshwaram Cafe: ಬಾಂಬರ್ ತುಮಕೂರು ಮಾರ್ಗವಾಗಿ ಭಟ್ಕಳಕ್ಕೆ ತೆರಳಿರುವ ಶಂಕೆ
ಪರೀಕ್ಷೆ ಇದೆ ಬಿಡಿ ಎಂದು ಶಾಲಾ ಬಾಲಕಿ ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೆ ವ್ಯಕ್ತಿ ಬಾಲಕಿಯ ಮೂತಿ ಹಾಗು ಕೆನ್ನೆಗೆ ಬಾರಿಸಿದ್ದಾನೆ. ಘಟನೆ ಸಂಬಂಧ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೃದ್ದನ ನಡೆಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ.
ಘಟನೆ ಸಂಬಂಧ ಮಂಡ್ಯ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.