Saturday, May 18, 2024

ಪ್ರಜ್ವಲ್​ ರೇವಣ್ಣನ ಬಂಧನವಾಗಬೇಕು, ಸರಿಯಾದ ತನಿಖೆಗೆ ಗುರಿಪಡಿಸಬೇಕು: ಸಂಸದ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಅರೆಸ್ಟ್​ ಆಗಬೇಕು, ಸರಿಯಾದ ತನಿಖೆಗೆ ಗುರಿಪಡಿಸಬೇಕು ಇದರ ಬಗ್ಗೆ SIT ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರಹ್ಲಾದ್​ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅರೆಸ್ಟ್​ ಆಗಬೇಕು, ಸರಿಯಾದ ತನಿಖೆಗೆ ಗುರಿಪಡಿಸಬೇಕು, ಈ ಬಗ್ಗೆ ಹಲವು ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇವೆಲ್ಲಾ ಸಂಗತಿಗಳನ್ನು ನೋಡಿದರೆ ಪ್ರಜ್ವಲ್​ ರೇವಣ್ಣ ಬಂಧನವಾಗಬೇಕು ಇದರ ಬಗ್ಗೆ ನಾನ್ನ ಮತ್ತು ನಮ್ಮ ಪಾರ್ಟಿ ನಿಲುವು ಸ್ಪಷ್ಟವಾಗಿದೆ. ಪ್ರಕರಣದ ಕುರಿತು ಎಸ್ಐಟಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಪ್ರಜ್ವಲ್‌ ರಾಸಲೀಲೆ ಕೇಸ್‌: ಬಿಜೆಪಿ ಮೇಲೆ ಪರಿಣಾಮ ಬೀರಲ್ಲ: ಬಿ.ವೈ ವಿಜಯೇಂದ್ರ

ಪ್ರಜ್ವಲ್ ರೇವಣ್ಣ ರಾಸಲೀಲೆಗಳ ವಿಡಿಯೋ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಡಿಯೋ ಯಾರು ಬಿಡುಗಡೆ ಮಾಡಿದ್ದಾರೆ ಎನ್ನುವುದು ನನ್ನ ಪ್ರಕಾರ ಚರ್ಚೆಯ ವಿಷಯವೇ ಅಲ್ಲಾ, ಮಹಿಳೆಯರ ಜೊತೆ ಪ್ರಜ್ವಲ್​ ನಡೆದುಕೊಂಡಿರುವ ರೀತಿ ಅತ್ಯಂತ ಗಂಭೀರ ವಿಷಯ ಎಂದು ಸಂಸದ ಪ್ರಹ್ಲಾದ್​ ಜೋಶಿ ತಿಳಿಸಿದರು.

ರೇವಣ್ಣ ಅವರ ಬಂಧನ ಒಂದು ದುರ್ದೈವದ ಸಂಗತಿ, ಅವರಿಗೆ ಈಗಾಗಲೇ ವಯಸ್ಸಾಗಿದೆ, ಇಂಥಾ ಸಂದರ್ಭದಲ್ಲಿ ಈ ರೀತಿ ಆಗಿರುವುದು ದುರ್ದೈವ. ಆದರೇ, ಇವರ ವಿರುದ್ದ ಸಾಕಷ್ಟು ಆರೋಪಗಳು ಕೇಳಿ ಬಂದಿದೆ, ಇದರ ಬಗ್ಗೆ ತನಿಖೆ ನಡೆಸುವುದು ಒಳ್ಳೆಯದು. ಆದರೇ, ಅವರನ್ನು ಬಂಧಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದರ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES