Thursday, May 9, 2024

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ನಾವು ಕಾಂಗ್ರೆಸ್​ನವರು : ರಾಮಲಿಂಗಾರೆಡ್ಡಿ

ಹುಬ್ಬಳ್ಳಿ : ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ನಾವು ಕಾಂಗ್ರೆಸ್​ನವರು. ನಮಗಿದ್ದಷ್ಟು ದೇಶಾಭಿಮಾನ ಅವರಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿಗರ ವಿರುದ್ಧ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪೂರ್ವಜರು ಅಂದ್ರೆ ಆರ್​ಎಸ್​ಎಸ್, ಹಿಂದೂ ಪರಿಷತ್ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೇ ನಮ್ಮ ಕಾಂಗ್ರೆಸ್ ಪಕ್ಷ ಎಂದು ಕುಟುಕಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಮಾತನಾಡಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣ ಕೂಗಿದವರನ್ನು ನಾವೆಲ್ಲರೂ ಖಂಡಿಸಿದ್ದೇವೆ. ಅದನ್ನು ಯಾರು ಒಪ್ಪುವಂತದ್ದಲ್ಲ, ಕೇಸ್ ಹಾಕಿ ಜೈಲಿಗೆ ಕಳಿಸಿದ್ದೇವೆ ಎಂದು ಹೇಳಿದರು.

ಅವತ್ತು ಬಿಜೆಪಿ ಅವರು ಸುಮ್ಮನೆ ಇದ್ರು

ಬಿಜೆಪಿ ಅವರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವಾಗ ಕಾರ್ಯಕರ್ತ ಒಬ್ಬ ಪಾಕ್ ಪರ ಘೋಷಣೆ ಕೂಗ್ತಾನೇ. ಇನ್ನೊಬ್ಬ ಅವನ ಬಾಯಿ ಮುಚ್ಚಿದ್ರು ಅದನ್ನೇ ಕೂಗ್ತಾನೆ. ಅವತ್ತು ಬಿಜೆಪಿ ಅವರು ಸುಮ್ಮನೆ ಇದ್ರು. ನಾವು ಅವತ್ತು ಖಂಡಿಸಿದ್ದೇವೆ, ಇವತ್ತು ಖಂಡಿಸಿದ್ದೇವೆ, ಮುಂದೇನು ಖಂಡಿಸುತ್ತೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

RELATED ARTICLES

Related Articles

TRENDING ARTICLES