ಶಿವಮೊಗ್ಗ : ಮಲ್ಲಿಕಾರ್ಜುನ ಖರ್ಗೆ ಅಂತಹವರಿಗೆ ಪ್ರಿಯಾಂಕ್ ಖರ್ಗೆ ಅಂತಹವರು ಹುಟ್ಟಿರುವುದೇ ಅನ್ಯಾಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಯಾವುದೇ ಕಾರಣಕ್ಕೂ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿಲ್ಲ ಅಂದಿದ್ದರು. ಎ2 ಆರೋಪಿ ಕುಟುಂಬ ಸಮೇತ ಓಡಿ ಹೋಗಿದ್ದಾನೆ. ಅವನು ಓಡಿ ಹೋಗಲು ಯಾರು ಕಾರಣ? ಎಂದು ಪ್ರಶ್ನಿಸಿದರು.
ಪೊಲೀಸರ ವೈಫಲ್ಯವಾ? ರಾಜ್ಯ ಸರ್ಕಾರ ಸಹಕಾರ ಕೊಟ್ಟಿದೆಯಾ? ಪಾಕಿಸ್ತಾನ ಪರವಾಗಿ ಇರುವ ವ್ಯಕ್ತಿಗಳು ಸಹಕಾರ ಕೊಟ್ಟಿದ್ದಾರಾ? ಪಾಕಿಸ್ತಾನ ಜಿಂದಾಬಾದ್ ಕೂಗಿಯೇ ಇಲ್ಲ ಅಂದ್ರಲ್ಲ ಡಿಕೆಶಿ, ಅವರು ಏನಾದರೂ ಸಹಕಾರ ಕೊಟ್ಡಿದ್ದಾರಾ? ಎಂದು ಕಿಡಿಕಾರಿದರು.
ಕರ್ನಾಟಕ ರಾಷ್ಟ್ರ ದ್ರೋಹಿಗಳ ತಾಣ ಆಗ್ತಿದೆ
ಕರ್ನಾಟಕ ರಾಜ್ಯ ರಾಷ್ಟ್ರ ದ್ರೋಹಿಗಳ ತಾಣ ಆಗುತ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್ ರಾಜ್ಯದಲ್ಲಿ ಮಾಮೂಲಿ ಆಗಿರೋದು ರಾಜ್ಯದ ಜನತೆಗೆ ಅಪಮಾನ. ಪಾಕಿಸ್ತಾನ ಪರ ಘೋಷಣೆ ಕೂಗಿದವರು, ಬ್ಲಾಸ್ಟ್ ಮಾಡಿದವರ ಪರ ಬೆಂಬಲ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತೇನೆ
ಪರಮೇಶ್ವರ್ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ, ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾರೆ ಅಂತಿದ್ದಾರೆ. ಪರಮೇಶ್ವರ್, ಸಿಎಂ ರಾಷ್ಟ್ರ ದ್ರೋಹಿಗಳ ರಕ್ಷಣೆ ಮಾಡಲ್ಲ ಅಂದಿದ್ದರು. ಪರಮೇಶ್ವರ್, ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತೇನೆ. ಪರಮೇಶ್ವರ್, ಸಿಎಂ ಬಿಟ್ಟು ಬೇರೆಯವರು ಎಲ್ಲಾ ಬೇರೆ ಮಾತನಾಡಿದ್ರು. ಡಿಕೆಶಿ ಈಗ ಏನು ಹೇಳ್ತಾರೆ? ಎಂದು ಹರಿಹಾಯ್ದರು.