Sunday, April 28, 2024

ರಾಹುಲ್ ಗಾಂಧಿ ಬಟಾಟೆಯಿಂದ ಬಂಗಾರ ತೆಗೆಯೋದು ಹೇಗೆ ಅಂತ ಹೇಳ್ತಿದ್ದಾರೆ : ಅನಂತಕುಮಾರ್ ಹೆಗಡೆ

ಬೆಳಗಾವಿ : ರಾಹುಲ್ ಗಾಂಧಿ ದೇಶದ ಪ್ರತಿ ಮೂಲೆಗೂ ಹೋಗಿ ಬಟಾಟೆಯಿಂದ ಬಂಗಾರ ತೆಗೆಯೋದ ಹೇಗೆ ಅಂತ ಹೇಳ್ತಿದ್ದಾರೆ. ಇಂತಹ ಮಾತುಗಳಿಗೆ ಕಿವಿ, ಸಮಯ ನೀಡೋದು ಬೇಡ ಎಂದು ಸಂಸದ ಅನಂತಕುಮಾರ್ ಹೆಗಡೆ ಟೀಕಿಸಿದರು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಡಬಡಿಸುತ್ತಿದ್ದಾರೆ, ಹಿಂದೆ ಮುಂದೆ ಎಂದಿದೆಗೂ ಬಡಬಡಿಸೋದೆ ಕಾಂಗ್ರೆಸ್ ಕೆಲಸ ಎಂದು ಕುಟುಕಿದರು.

ದೇಶದ ಪ್ರತಿ ಮನೆಗೆ ಪ್ರಧಾನಿ ನರೇಂದ್ರ ಮೋದಿ ಯೋಜನೆಗಳು ತಲುಪಿವೆ. ನಮಗೆ ಗೊತ್ತಿಲ್ಲ, 350 ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಓದಿ ಹೇಳಲು ಆಗದಷ್ಟು ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ನೀಡಿದೆ. ಮಕ್ಕಳಿಗೆ, ವೃದ್ಧರಿಗೆ, ರೈತರು, ಉದ್ಯಮಿಗಳಿಗೆಲ್ಲ ಯೋಜನೆ ಜಾರಿಯಾಗಿವೆ. ಪ್ರತಿಕ್ಷೇತ್ರದಲ್ಲೂ ಮೋದಿ ಸರ್ಕಾರದ ಕೊಡುಗೆ ಇದೆ. ಹೇಳಿಕೊಳ್ಳಲು ನಮಗೆ ನಮ್ಮಲ್ಲಿ ಬಹಳಷ್ಟು ಇದೆ ಎಂದು ಹೇಳಿದರು.

400ಕ್ಕೂ ಅಧಿಕ ಸೀಟು ಗೆಲ್ಲುವ ಗುರಿ ಇಟ್ಟುಕೊಳ್ಳಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು 400ಕ್ಕೂ ಅಧಿಕ ಸೀಟು ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು. 400 ಸೀಟು ಯಾಕೆ ಬರಬೇಕು ಅನೋದನ್ನು ಜನರಿಗೆ ಒತ್ತಿ ಹೇಳಬೇಕು. ರಾಜ್ಯಸಭೆಯಲ್ಲಿ ಟು ಥರ್ಡ್‌ ಮೆಜಾರಿಜಿ ಆಗಬೇಕು. ಇವತ್ತಲ್ಲ ನಾಳೆ ಮತ್ತೆ ಚುನಾವಣೆಯಲ್ಲಿ ಬಿಜೆಪಿ ಟು ಥರ್ಡ್‌ ಮೆಜಾರಿಟಿ ಬರುತ್ತೆ, ಆಗ ಬದಲಾವಣೆ ಆಗುತ್ತದೆ ಎಂದು ಅನಂತಕುಮಾರ್ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES