ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಉಲ್ಟಾ ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆ ಆಗಲಿ ಅದೇನಿದೆ ಅಂತ ಹೊರಗೆ ಬರುತ್ತೆ. ನೋಡೋಣ ಏನು ಬರುತ್ತೆ ಅಂತ ಎಂದು ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಏನು ಉತ್ತರ ಕೊಡ್ತಾರೆ ಅಂತ ನೋಡೋಣ. ಈಗ ಬೆಂಗಳೂರಿಗೆ ಬರ್ತಾ ಇದ್ದಾರೆ. ಮೀಡಿಯಾ ಮೇಲೆ ನಾವು ಎಫ್ಐಆರ್ ಹಾಕುತ್ತೇನೆ ಅಂತ ಅಂದಿಲ್ಲ. ಸದನದಲ್ಲಿ ನಾನು ಮಾಧ್ಯಮದ ವಿರುದ್ಧ ಮಾತನಾಡಿಲ್ಲ. ಖಾಸಗಿ ರಿಪೋರ್ಟ್ನಲ್ಲಿ ಏನಿದೆ? ಸಂವಾದ ರಿಪೋರ್ಟ್ ನಲ್ಲಿ ಕೂಡ ಖಚಿತವಾಗಿ ಇದೆ ಅಂತ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಸುರ್ಜೇವಾಲ ಏನು ಟ್ವೀಟ್ ಮಾಡಿದ್ರು
ರಣದೀಪ್ ಸುರ್ಜೇವಾಲ ಏನು ಟ್ವೀಟ್ ಮಾಡಿದ್ರು ಅಂತ ಗೊತ್ತಿಲ್ಲ. ರಾಜ್ಯ ಸರ್ಕಾರ ಪಾಕ್ ಪರ ಘೋಷಣೆ ಪ್ರಕರಣವನ್ನು ಸಮರ್ಥನೆ ಮಾಡಿಕೊಂಡಿಲ್ಲ. ಖಾಸಗಿ ರಿಪೋರ್ಟ್ ಅನ್ನು ಸರ್ಕಾರಿ ರಿಪೋರ್ಟ್ ಅಂತ ಹೇಳಲು ಆಗಲ್ಲ. ನಾನು ವೈಜ್ಞಾನಿಕವಾಗಿ ಪರಿಷ್ಕರಣ ಆಗಲಿ ಅಂದಿದ್ದೆ. ಈಗ FSL ವರದಿ ಬರಲಿ ಏನಾಗುತ್ತೆ ಅಂತ ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.