ರಾಯಚೂರು: ಬರಿದಾದ ಜಲ ಮೂಲದಿಂದ ಅಕ್ಷರಶಃ ನೀರಿಗಾಗಿ ಹಾಹಾಕಾರ ಶುರುವಾಗಿ ಜನರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು,ಮಸ್ಕಿ ಪಟ್ಟಣದಲ್ಲಿ ಕುಡಿಯುವ ನೀರಿನ ಕೆರೆ ಖಾಲಿಯಾಗಿದ್ದು,ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಅತೀವ ಕುಡಿವ ನೀರಿನ ತೊಂದರೆ ಉಂಟಾಗಿದೆ.ಜನರು ಎಲ್ಲಾ ಕೆಲಸಗಳನ್ನು ಬಿಟ್ಟು ನೀರಿನ ಟ್ಯಾಂಕ್ ಬರುವಿಕೆಗಾಗಿ ಕಾಯುವ ಸ್ಥಿತಿ ಇದೆ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಖಿಗೆ ಪರದಾಟುವಂತೆ ಮಾಡಿದೆ.ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಕೆರೆ ತುಂಬಿಸಿಕೊಂಡಲು ವಿಫಲರಾಗಿದ್ದಾರೆ. 15 ದಿನಕ್ಕೊಮ್ಮೆ ನೀರು ಪೂರೈಸಲು ಸಾಧ್ಯವಾಗದ ದುಸ್ಥಿತಿ ಈ ಪಟ್ಟಕ್ಕೆ ಒದಗಿದೆ.