Thursday, May 9, 2024

ಬರಿದಾದ ಜಲ ಮೂಲ: ನೀರಿಗಾಗಿ ಜನರ ಪರದಾಟ

ರಾಯಚೂರು: ಬರಿದಾದ ಜಲ ಮೂಲದಿಂದ ಅಕ್ಷರಶಃ ನೀರಿಗಾಗಿ ಹಾಹಾಕಾರ ಶುರುವಾಗಿ ಜನರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು,ಮಸ್ಕಿ ಪಟ್ಟಣದಲ್ಲಿ ಕುಡಿಯುವ ನೀರಿನ ಕೆರೆ ಖಾಲಿಯಾಗಿದ್ದು,ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಅತೀವ ಕುಡಿವ ನೀರಿನ ತೊಂದರೆ ಉಂಟಾಗಿದೆ.ಜನರು ಎಲ್ಲಾ ಕೆಲಸಗಳನ್ನು ಬಿಟ್ಟು ನೀರಿನ ಟ್ಯಾಂಕ್​ ಬರುವಿಕೆಗಾಗಿ ಕಾಯುವ ಸ್ಥಿತಿ ಇದೆ.

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಖಿಗೆ ಪರದಾಟುವಂತೆ ಮಾಡಿದೆ.ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಕೆರೆ ತುಂಬಿಸಿಕೊಂಡಲು ವಿಫಲರಾಗಿದ್ದಾರೆ. 15 ದಿನಕ್ಕೊಮ್ಮೆ ನೀರು ಪೂರೈಸಲು ಸಾಧ್ಯವಾಗದ ದುಸ್ಥಿತಿ ಈ ಪಟ್ಟಕ್ಕೆ ಒದಗಿದೆ.

RELATED ARTICLES

Related Articles

TRENDING ARTICLES