ಕಲಬುರಗಿ : ನಾನು ಮಲ್ಲಿಕಾರ್ಜುನ ಖರ್ಗೆಯವರಿಗೆ ಚಾಲೆಂಜ್ ಮಾಡುತ್ತೇನೆ. ಮೋದಿಯವರ ಅಕೌಂಟ್ನಲ್ಲಿ ಎಷ್ಟು ಹಣವಿದೆ? ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಮಾಜಿ ಶಾಸಕ ಎನ್. ಮಹೇಶ್ ಸವಾಲ್ ಹಾಕಿದರು.
ಕಲಬುರಗಿಯಲ್ಲಿ ನಡೆದ ಬಲವವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಮಾತನಾಡಿದ ಅವರು, ತಂದೆ, ಮಗ, ಇವಾಗ ಅಳಿಯ. ಕಲಬುರಗಿ ನಿಮಗೆ ಬರೆದುಕೊಟ್ಟಿದ್ದಾರೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕಿಡಿಕಾರಿದರು.
ದಲಿತರಿಗೆ ಕಾಂಗ್ರೆಸ್ ಏನು ಮಾಡಿಲ್ಲ. ನಮ್ಮ ಎಸ್ಸಿ, ಎಸ್ಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ನಮ್ಮ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಿಸಿಕೊಂಡಿದೆ. ದಲಿತರಿಗೆ ಮಹಾನ್ ಲಾಭ ಮಾಡಿದ್ದೇವೆ ಅಂತ ಕಾಂಗ್ರೆಸ್ನವರು ಹೇಳ್ತಾರೆ. ಇದರಿಂದ ದಲಿತರಿಗೆ ಏನು ಲಾಭ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಸಮಾಧಿಗೆ ಒಂದಿಂಚೂ ಜಾಗ ನೀಡಿಲ್ಲ
ಅಂಬೇಡ್ಕರ್ ಸಮಾಧಿಗೆ ದೆಹಲಿಯಲ್ಲಿ ಒಂದಿಂಚೂ ಜಾಗ ನೀಡಿಲ್ಲ. ಇವಾಗ ನೋಡಿದ್ರೆ ಮಲ್ಲಿಕಾರ್ಜುನ ಖರ್ಗೆಯವರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಪ್ರಜಾಪ್ರಭುತ್ವ ಎಲ್ಲಿ ಅಪಾಯದಲ್ಲಿದೆ? ಇಂದಿರಾ ಗಾಂಧಿ ಕಾಲದಲ್ಲಿ ಸಂವಿಧಾನವನ್ನೇ ಬರ್ಖಾಸ್ತು ಮಾಡಲಾಗಿತ್ತು. ಮೋದಿಯವರು ದಲಿತರಿಗೆ ಬೆಲೆ ಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್. ಮಹೇಶ್ ವಾಗ್ದಾಳಿ ನಡೆಸಿದರು.