Sunday, May 5, 2024

ಟ್ರಕ್ಕಿಂಗ್​ ಗೆ ಬಂದ ಯುವಕ ಕಣ್ಮರೆ!

ಚಿಕ್ಕಮಗಳೂರು: ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಕಾಣೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿ ನಡೆದಿದೆ.

ಭರತ್​ ಕಾಣೆಯಾಗಿರುವ ಯುವಕ, ಬಿ,ಇ ಮುಗಿಸಿರುವ ಭರತ್​ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಬೆಂಗಳೂರನಿಂದ ತನ್ನ ಹಾರ್ನೆಟ್​ ಬೈಕ್ ನಲ್ಲಿ ಚಾರಣಕ್ಕೆಂದು ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರುವ ರಾಣಿ ಝರಿ ಪಾಯಿಂಟ್​ಗೆ ಬಂದಿದ್ದ ವೇಳೆ ಕಾಣೆಯಾಗಿದ್ದಾನೆ.

ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

ಮಗ ಮಿಸ್ಸಿಂಗ್ ಆಗಿರುವ ವಿಚಾರ ತಿಳಿದು ಭರತ್​ ಪೋಷಕರು ಹುಡುಕಿಕೊಂಡು ಬಂದಿದ್ದಾರೆ. ಕಾಣೆಯಾಗಿರುವ ಭರತ್​ಗಾಗಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹುಡುಕಾಟ ನಡೆದಿದ್ದು ಈ ವೇಳೆ ರಾಣಿಝರಿ ಪಾಯಿಂಟ್​ ನಲ್ಲಿ ಬೈಕ್ ಸಿಕ್ಕಿದ್ದು ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್​, ಚಪ್ಪಲಿ ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES